ಪರೇಶ ಮೇಸ್ತಾ ಕುಟುಂಬಕ್ಕೆ ನನ್ನ ಕರ್ತವ್ಯ ಎಂದು ನೆರವಾಗಿದ್ದೇವೆ: ವಾಪಸ್ಸು ನೀಡಿದ ಹಣ ನನಗೆ ತಲುಪಿಲ್ಲ ಆರ್.ವಿ.ದೇಶಪಾಂಡೆ.

ಹೊನ್ನಾವರ : ಪಕ್ಷದ ಕಾರ್ಯಕ್ರಮದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚೀವ ಆರ್.ವಿ.ದೇಶಪಾಂಡೆ ನಮ್ಮ ಸರ್ಕಾರದ ಅವಧಿಯಲ್ಲಿ ಹೊನ್ನಾವರದ ಪರೇಶ ಮೃತಪಟ್ಟಿದ್ದರು. ಕುಟುಂಬದವರ ಬೇಡಿಕೆಯಂತೆ ಪ್ರಕರಣವನ್ನು ಸಿ.ಬಿ.ಐ.ಗೆ ವರ್ಗಾಯಿಸಲಾಗಿದೆ. ಕೇಂದ್ರದಲ್ಲಿ ಆಗಲೂ ಹಾಗೂ ಈಗಲೂ ಬಿಜೆಪಿ ಸರ್ಕಾರವಿದ್ದು, ಪ್ರಕರಣದ ಬಗ್ಗೆ ಅವರು ಹಾಗೂ ಆ ಪಕ್ಷದ ನಾಯಕರು ಉತ್ತರಿಸಬೇಕಿದೆ. ನನ್ನ ಕರ್ತವ್ಯದಂತೆ ಮಾನವಿಯತೆಯಿಂದ ಆ ಕುಟುಂಬಕ್ಕೆ ನೆರವಾಗಿದ್ದೆ. ಆದರೆ ಅವರು ಪತ್ರಿಕಾಗೊಷ್ಟಿಯಲ್ಲಿ ಹಣ ವಾಪಸ್ಸು ನೀಡಿರುದಾಗಿ ಹೇಳಿದ್ದರು. ಆದರೆ ಇದುವರೆಗೂ ಹಣ ವಾಪಸ್ಸು ಬಂದಿಲ್ಲ. ಬೇರೆ ಯಾರ ಮೂಲಕ ನೀಡಿದ್ದಾರೊ ನನ್ನಲ್ಲಿ ಮಾಹಿತಿ ಇಲ್ಲ ಎಂದರು.

ಘೊಟ್ನೇಕರ್ ಪ್ರಚಾರ ಕಾರ್ಯದಲ್ಲಿ ತೊಡಗದೇ ಇರುವ ಬಗ್ಗೆ ಪ್ರಶ್ನಿಸಿದಾಗ ಪಂಚಾಯತಿ ವ್ಯವಸ್ಥೆ ಬಲಪಡಿಸುವುದು ಕಾಂಗ್ರೇಸ್ ಪಕ್ಷಕ್ಕಿದೆ. ದೇಶಪಾಂಡೆ ಅಥವಾ ಮತ್ಯಾರೆ ಆಗಲಿ ಒರ್ವರಿಂದ ಪಕ್ಷವಿಲ್ಲ. ಪಕ್ಷ ಬಲವರ್ಧನೆಗೆ ಎಲ್ಲರೂ ಸಹಕರಿಸಿದ್ದಾರೆ. ಈ ಬಾರಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಪುನರುಚ್ಚರಿಸಿದರು,

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version