Follow Us On

WhatsApp Group
Important
Trending

ದೋಣಿ ಹತ್ತುವ ವೇಳೆ ಕಾಲುಜಾರಿ ನೀರಿಗೆ ಬಿದ್ದು ನೀರುಪಾಲಾದ ವ್ಯಕ್ತಿ: ಶವಪತ್ತೆ

ಹೊನ್ನಾವರ: ತಾರಿ ದೋಣಿ ಹತ್ತುವ ವೇಳೆ ದೋಣಿಯಿಂದ ಕಾಲು ಜಾರಿ ಬಿದ್ದು ನೀರುಪಾಲಾದ ವ್ಯಕ್ತಿಯ ಶವ ಪತ್ತೆಯಾಗಿದೆ.ಹೊನ್ನಾವರ ತಾಲ್ಲೂಕಿನ ಶರಾವತಿ ನದಿಯ ಮೂಲಕ ಬಳ್ಕೂರಿನಿಂದ ಜಲವಳ್ಳ ಕರ್ಕಿಗೆ ದೋಣಿಯಲ್ಲಿ ತೆರಳುವಾಗ ದೋಣಿ ಹತ್ತುವ ಸಂದರ್ಭದಲ್ಲಿ ಕಾಲುಜಾರಿ ವ್ಯಕ್ತಿಯೊಬ್ಬ ನೀರಿಗೆ ಬಿದ್ದು ನೀರುಪಾಲಾಗಿದ್ದರು.

ವ್ಯಕ್ತಿಯ ಪತ್ತೆಗಾಗಿ ಸ್ಥಳಿಯರು ಪೊಲೀಸರು ಶೋಧ ಕಾರ್ಯ ನಡೆಸಿದ್ದು, ನದಿ ತೀರದಲ್ಲಿ ಶವ ಪತ್ತೆಯಾಗಿದೆ. ಜಲವಳ್ಳೆ ಕರ್ಕಿಯ ಜಯಂತ ನಾಯ್ಕ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಶವ ಪತ್ತೆಯಾದ ಬಳಿಕ ಸ್ಥಳಕ್ಕೆ ಶಾಸಕ ಸುನೀಲ್ ನಾಯ್ಕ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮೃತ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಲು ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.ಈ ಸಂಬಂಧ ಮಂಕಿ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Back to top button