Important
Trending

ಕಾರ್ ಮತ್ತು ಕಂಟೈನರ್ ಲಾರಿ ನಡುವೆ ಅಪಘಾತ : ಅದೃಷ್ಟದಿಂದ ಬದುಕುಳಿದ ಪ್ರಯಾಣಿಕರು

ಅಂಕೋಲಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಅಂಕೋಲಾ ಹುಬ್ಬಳ್ಳಿ ಮಾರ್ಗಮಧ್ಯೆ ರಾಮನಗುಳಿ ಬಳಿ ಕಾರು ಹಾಗೂ ಲಾರಿ‌ ನಡುವೆ ಅಪಘಾತ ಸಂಭವಿಸಿದೆ.ಈ ಹಿಂದೆ ಇದೆ ಹೆದ್ದಾರಿಯಲ್ಲಿ ಸಾಕಷ್ಟು ಸಾವು ನೋವುಗಳಾಗಿದ್ದು ಸಾವಿನ ಹೆದ್ದಾರಿ ಎಂಬಷ್ಟರಮಟ್ಟಿಗೆ ಕುಖ್ಯಾತಿ ಯಾಗಿದೆ.

ಆದರೂ ಈ ದಿನ ನಡೆದ ರಸ್ತೆ ಅಪಘಾತದಲ್ಲಿ ಅದೃಷ್ಟ ವಶಾತ್ ಕಾರಿನ ಏರ್ ಬ್ಯಾಗ್ ಸಮಯಕ್ಕೆ ಸರಿಯಾಗಿ ಓಪನ್ ಆಗಿದ್ದರಿಂದ ಯಾವುದೇ ಪ್ರಾಣಹಾನಿಯಾಗದೇ ಹೊಸ ವರ್ಷದ ಮೊದಲ ದಿನ ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.

ರಾಮನಗುಳಿ ಆರ್.ಎಫ್.ಓ ಕಛೇರಿ ಎದುರು ನಡೆದ ರಸ್ತೆ ಅಪಘಾತದಲ್ಲಿ ಗೋಕಾಕ ಮೂಲದ ಕಾರು ಹಾಗೂ ರಾಜಸ್ಥಾನ ಮೂಲದ ಲಾರಿ‌ ನಡುವೆ ಅಪಘಾತ ಸಂಭವಿಸಿದೆ.ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಕುಟುಂಬ ಸಮೇತ ಕಾರಿನಲ್ಲಿ ಹೊರಟಿದ್ದ 3 ಪುರುಷರು,2 ಮಹಿಳೆಯರು, ಇಬ್ಬರು ಮಕ್ಕಳು ಸೇರಿ ಒಟ್ಟು 7 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಲಾರಿಯು ಕಾರಿಗೆ ಡಿಕ್ಕಿ ಹೊಡೆದು, ನಂತರ ಹತ್ತಿರದ 33 ಕೆ.ವಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದರೂ ಅದೃಷ್ಟವಶಾತ್ ಹೆಚ್ಚಿನ ಹಾನಿಯಾಗಿಲ್ಲ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button