ದೇವಸ್ಥಾನದ ಬೀಗ ಮುರಿದು ಕಳ್ಳತನ: ತಾಳಿಸರ ಸೇರಿ ಹಲವು ವಸ್ತುಗಳ ಕಳುವು

ಶಿರಸಿ: ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು, ಇಲ್ಲಿನ ಬನವಾಸಿಯ ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿದ್ದ ಸುಮಾರು 16 ಸಾವಿರ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಪಂಚಲೋಹದ ಕರಿಮಣಿ, ತಾಳಿಸರ, ಹಿತ್ತಾಳೆಯ ಸಮೆ, ಹಿತ್ತಾಳೆಯ ಮಂಗಳಾರತಿ ತಟ್ಟೆ, ತಾಮ್ರದ ಹರಿವಾಣ, ತಾಮ್ರದ ಕೊಡಪಾನ, ಆರತಿ ತಟ್ಟೆ, ತಾಮ್ರದ ತಂಬಿಗೆ, ತಾಮ್ರದ ಚಿಕ್ಕ ಲೋಟ, ಮಹಾಮಂಗಳಾರತಿ ಧೂಪದತಟ್ಟೆ, ಹಿತ್ತಾಳೆಯ ತೂಗುದೀಪ, ಹಿತ್ತಾಳೆಯ ಜಾಗಟೆಗಳನ್ನು ಕದ್ದೊಯ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version