ಇಲಿ-ಹೆಗ್ಗಣಗಳ ಪಾಲಾಗುತ್ತಿರುವ ಪಡಿತರ ಧಾನ್ಯ: ಸೀಮೆ ಎಣ್ಣೆ ಕಾಳಸಂತೆಯಲ್ಲೇ ಸಿಗುವ ಗುಟ್ಟೇನು ? ನ್ಯಾಯ ಎಲ್ಲಿದೆ ಎಂದು ನ್ಯಾಯಬೆಲೆ ಅಂಗಡಿ ವಿರುದ್ಧ ಆಕ್ರೋಶ

ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವಾಟ್ಸಪ್ ದೂರಿನಲ್ಲೇನಿದೆ?

ಅಂಕೋಲಾ: ಪಡಿತರ ವ್ಯವಸ್ಥೆ ಬಗ್ಗೆ ಆಗಾಗ ಹತ್ತಾರು ದೂರುಗಳು ಕೇಳಿಬರುತ್ತಲೇ ಇದ್ದು.  ಸಂಬಂಧಿಸಿದ ಕೆಲ ಇಲಾಖೆಗಳ ನಿರ್ಲಕ್ಷದಿಂದ ಕೆಲವೊಮ್ಮೆ ಸಾಮಾನ್ಯ ಜನರ ಜೀವನ ಹೈರಾಣಾಗುವುದರ ಜೊತೆ ನ್ಯಾಯ ಎಲ್ಲಿದೆ ಎಂದು ಕೇಳುವಂತಾಗಿದೆ ? ತಾಲೂಕಿನ ಬೊಬ್ರವಾಡ ಶಾಖೆಯ  ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ವ್ಯವಸ್ಥೆ ಸಮರ್ಪಕವಾಗಿಲ್ಲ, ಹುಳು ಹುಪ್ಪಡೆಗಳು ಇರುವ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ  ಎಂದು ಜಿಲ್ಲಾಧಿಕಾರಿಗಳಿಗೆ ಶೇಡಿಕುಳಿಯ ಹರೀಶ ಎನ್ನುವ ವ್ಯಕ್ತಿಯೋರ್ವರು ವಾಟ್ಸಪ್ ಮೂಲಕ ದೂರು ನೀಡಿರುವುದು , ಈ ಕುರಿತು ದೂರಿನ ( screen shot) ಕಾಪಿ, ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವಸ್ತು ಸ್ಥಿತಿ ಸಾರಿ ಹೇಳುವಂತಿದೆ. ‘

ಪಡಿತರ ವಿತರಿಸುವ ಸ್ಥಳದಲ್ಲಿ ಇಲಿ ಹೆಗ್ಗಣಗಳ ವಾಸಸ್ಥಾನವಾಗಿದ್ದು ಅತ್ಯಂತ ಕಳಪೆ ದರ್ಜೆಯ ಆಹಾರ ಧಾನ್ಯ ನೀಡಲಾಗುತ್ತಿದೆ.  ಇದರಿಂದ ನಾಗರಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ಆಸ್ಪತ್ರೆ ಸೇರಿದ್ದೂ  ಇದೆ ಇತ್ಯಾದಿ ಅಂಶಗಳನ್ನು ದೂರಿನಲ್ಲಿ ತಿಳಿಸಲಾಗಿದೆ. ಹಾಗಾಗಿ ಕೆಟ್ಟ ಪಡಿತರ ಅಕ್ಕಿಯನ್ನು  ನಾನು ಪುನಃ  ಪಡಿತರ ಅಂಗಡಿಗೆ ವಾಪಸ್ಸು ಮಾಡಿರುವೆ ಎಂದು ತಿಳಿಸಲಾಗಿದೆ.

ಬೊಬ್ರವಾಡ ಪಡಿತರ ವಿತರಣಾ ಶಾಖಾ ಕೇಂದ್ರದ ಅವ್ಯವಸ್ಥೆ ಕುರಿತು ಹಲವಾರು ಬಾರಿ ಆಹಾರ ನಿರೀಕ್ಷಕರ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ, ಸೀಮೆ ಎಣ್ಣೆ ಒಂದೇ ದಿನಕ್ಕೆ ಸೀಮಿತವಾಗಿ ವಿತರಿಸಿ ಮುಗಿಸಲಾಗುತ್ತಿದೆ, ತಾಲೂಕಿನಲ್ಲಿ ಕಾಳಸಂತೆಯಲ್ಲಿ ಪಡಿತರದ ಸೀಮೆ ಎಣ್ಣೆ  ಲಭ್ಯವಿದೆ. ಪಡಿತರ ಕೇಂದ್ರದಲ್ಲಿ ಸರ್ಕಾರದ ಯಾವುದೇ ಸುತ್ತೋಲೆಗಳಿಗೆ ಗೌರವ ನೀಡಲಾಗುತ್ತಿಲ್ಲ ಎಂದು ದೂರು ನೀಡಲಾಗಿದ್ದು ಜಿಲ್ಲಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವಂತೆ  ಆಗ್ರಹಿಸಿ ವಿನಂತಿಸಲಾಗಿದೆ.

ಜನಪರ ಕಾಳಜಿಯ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ಜಿಲ್ಲಾಧಿಕಾರಿಗಳು ಇಂತಹ ಅವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿ,ನಾಗರಿಕ ಸೌಲಭ್ಯ ಪೂರೈಕೆಗೆ ವಿಶೇಷ ಕಾಳಜಿ ತೆಗೆದುಕೊಳ್ಳಲಿದ್ದಾರೆ ಎನ್ನುವ ವಿಶ್ವಾಸ ಹಲವು ನಾಗರಿಕರದ್ದಾಗಿದೆ.       

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ: ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ

Exit mobile version