ಹಣಕಾಸಿನ ವ್ಯವಹಾರ ದ್ವೇಷ:  ಮೂವರ ಮೇಲೆ ಹಲ್ಲೆ: ಅಪ್ಪನಿಗೆ ಹಣ ಕೊಟ್ಟು, ಮಗಳಿಗೆ ವಾಪಸ್ ಮಾಡೆಂದ ಭೂಪ ?

 ಅಂಕೋಲಾ:ಹಣಕಾಸಿನ ವ್ಯವಹಾರ ಕ್ಕೆಸಂಬಂಧಿಸಿದ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಮೂವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ತಾಲೂಕಿನ ಅಡಿಗೋಣ ಹೆಗ್ರೆಯಲ್ಲಿ ನಡೆದಿದೆ.ಅಡಿಗೋಣ ಹೆಗ್ರೆ ನಿವಾಸಿಗಳಾದ ಪ್ರಭಾಕರ ವಾದಿರಾಜ ಶೇಟ್ (70) ಕಲ್ಯಾಣಿ ಪ್ರಭಾಕರ ಶೇಟ್ (62)ಲಕ್ಷ್ಮೀನಾರಾಯಣ ಪ್ರಭಾಕರ ಶೇಟ್ (27) ಇವರ ಮೇಲೆ ಹಲ್ಲೆ ಮಾಡಲಾಗಿದ್ದು , ಹೆಗ್ರೆಯ ನಿತ್ಯಾನಂದ ವಿಠ್ಠಲ ರೇವಣಕರ್ ಎಂಬಾತನೇ ಹಲ್ಲೆ ನಡೆಸಿದ್ದ ಆರೋಪಿಯಾಗಿದ್ದಾನೆ.

ಆರೋಪಿ ನಿತ್ಯಾನಂದ ಮತ್ತು ಪ್ರಭಾಕರ  ಶೇಟ್ ಅವರ ನಡುವೆ ಹಿಂದಿನಿಂದಲೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ದ್ವೇಷ ಇತ್ತು ಎನ್ನಲಾಗಿದ್ದು ಇತ್ತೀಚೆಗೆ ನಿತ್ಯಾನಂದ,  ಕಾರವಾರದ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಭಾಕರ ಶೇಟ್ ಅವರ ಮಗಳ ಬಳಿ  ಹಣಕ್ಕಾಗಿ ಪೀಡಿಸಿದ್ದ ಎನ್ನಲಾಗಿದ್ದು ,  ಅವಳು ತಂದೆಯ ಹತ್ತಿರ ಮಾಡಿದ ವ್ಯವಹಾರವನ್ನು ಅವರ ಬಳಿಯೇ ಕೇಳುವಂತೆ ಹೇಳಿದ್ದಾಳೆ.ಇದರಿಂದಾಗಿ ಸಿಟ್ಟಿಗೆದ್ದ ಆರೋಪಿ  ನಿತ್ಯಾನಂದ ಮಂಗಳವಾರ ರಾತ್ರಿ  ವಾಯುವಿಹಾರಕ್ಕೆ  ಬಂದಿದ್ದ ಪ್ರಭಾಕರ ಶೇಟ್ ಅವರ ಮಗ ಲಕ್ಷ್ಮೀ ನಾರಾಯಣ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.

ಈ ವಿಷಯವಾಗಿ  ಪೋಲೀಸ್ ಠಾಣೆಗೆ ದೂರು ದಾಖಲಿಸಲು ಹೋಗುವುದಕ್ಕಾಗಿ ಬುಧವಾರ ಬೆಳಗ್ಗೆ ಪ್ರಭಾಕರ ಶೇಟ್ ಮತ್ತು ಅವರ ಪತ್ನಿ  ಕಲ್ಯಾಣಿ ಹೆಗ್ರೆ ಬಸ್ ತಂಗುದಾಣದ ಬಳಿ ನಿಂತಾಗ ಅಲ್ಲಿಗೆ ಬಂದ ಆರೋಪಿ ನಿತ್ಯಾನಂದ ಪ್ರಭಾಕರ ಶೇಟ್ ಅವರ ಮುಖ ಮತ್ತು ತಲೆಯ ಮೇಲೆ ಕೈಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ.

ತಡೆಯಲು ಬಂದ ಕಲ್ಯಾಣಿ ಶೇಟ್ ಅವರನ್ನು ಎಳೆದಾಡಿ ಮೈ ಮುಖದ ಮೇಲೆ ಹೊಡೆದಿದ್ದಾನೆ ಮತ್ತು ಅವರ ಪುತ್ರ ಲಕ್ಷ್ಮೀ ನಾರಾಯಣ ಅವರನ್ನು   ಸಹ ಹೊಡೆದು ತೊಂದರೆ ನೀಡಿರುವುದಾಗಿ ಕಲ್ಯಾಣಿ ಶೇಟ್  ಅವರು  ಅಂಕೋಲಾ ಪೊಲೀಸ್ ಠಾಣೆಯಲ್ಲಿ  ದಾಖಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version