ಶಿರಸಿಗೆ ಹೋಗಿ ಕೆಲಸ ಕೇಳಿಬರುವುದಾಗಿ ಹೇಳಿ ಹೋದ ಯುವತಿ ನಾಪತ್ತೆ: ಹುಡುಕಿಕೊಡುವಂತೆ ದೂರು ದಾಖಲು

ಕಾರವಾರ: ಶಿರಸಿಗೆ ಹೋಗಿ ಕೆಲಸ ಕೇಳಿಬರುವುದಾಗಿ ತನ್ನ ತಾಯಿ ಹತ್ತಿರ ಹೇಳಿದ ಹೋದ ಯುವತಿ, ಬಳಿ ನಾಪತ್ತೆಯಾದ ಘಟನೆ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ. ಕೆಲಸ ಕೇಳಲು ಹೋಗಿ ಬರುವುದಾಗಿ ಹೋದ ಯುವತಿ ಇದುವರೆಗೂ ಮನೆಗೆ ಬಂದಿಲ್ಲ. ಅತ್ತ ಸಂಬoಧಿಕರ ಮನೆಗೂ ಹೋಗಿಲ್ಲ.

ನಾಪತ್ತೆಯಾದ ಯುವತಿಯನ್ನು ತಾಲೂಕಿನ ಗೊಟಗೋಡಿಕೊಪ್ಪದ ಪ್ರೀತಿ ರೇವಣಕರ(24) ಎಂದು ತಿಳಿದು ಬಂದಿದೆ. ತಮ್ಮ ಮಗಳನ್ನು ಹುಡುಕಿಕೊಡಿ ಎಂದು ನಾಪತ್ತೆಯಾದ ಯುವತಿ ಮನೆವಯರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version