ಕಾಂಗ್ರೆಸ್ ನಿದ್ದೆ ಮಾತ್ರೆ ಸೇವಿಸಿ ಗಾಢ ನಿದ್ರೆಯಲ್ಲಿದೆ: ಬಿಜೆಪಿ ಲೇವಡಿ

ಅಂಕೋಲಾ: ರಾಜ್ಯ ಹಾಗೂ ಕೇಂದ್ರ ಸರಕಾರದ ಬಿಜೆಪಿ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಪಕ್ಷ ಜಾಗತಿಕ ಭಯೋತ್ಪಾದಕ ಅಲ್ ಜವಾಹಿರಿ ರಾಜ್ಯದ ಹಿಜಾಬ್ ವಿಷಯದಲ್ಲಿ ಹೇಳಿಕೆ ನೀಡಿದಾಗ ಅದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುವ ತಾಕತ್ತು ಕಾಂಗ್ರೆಸ್ಸಿಗೆ ಯಾಕಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ನಿದ್ದೆ ಮಾತ್ರೆ ತೆಗೆದುಕೊಂಡು ಗಾಢ ನಿದ್ದೆಗೆ ಜಾರಿದ್ದೇಕೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಪ್ರಶ್ನೆ ಮಾಡಿದ್ದಾರೆ.

ಅವರು ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ ಅಲ್ ಖೈದಾ ಮುಖ್ಯಸ್ಥನಿಗೆ ಭಾರತದ ಆಂತರಿಕ ವಿಷಯದಲ್ಲಿ ಮಾತನಾಡುವ ಕೆಲಸ ಏನಿದೆ.ಶಾಲೆಗಳಲ್ಲಿ ಹಿಜಾಬ ಕುರಿತು ಭಾರತದ ಸಂವಿಧಾನದ ಪ್ರಕಾರ ಹೈಕೋರ್ಟ್ ಆದೇಶ ನೀಡಿದೆ ಇದು ಈ ದೇಶದ ಆಂತರಿಕ ವಿಚಾರ. ಆದರೆ ಈತ ಮಂಡ್ಯದ ಮುಸ್ಕಾನ್ ಎಂಬ ವಿದ್ಯಾರ್ಥಿನಿಯನ್ನು ಹಿಜಾಬ್ ವಿಷಯದಲ್ಲಿ ಸಮರ್ಥಿಸಿ ಭಾರತೀಯ ನ್ಯಾಯಾಂಗ ವ್ಯವಸ್ಥೆಗೇ ಸವಾಲು ಹಾಕಿದ್ದಾನೆ. ಈ ಬಗ್ಗೆ ಕಾಂಗ್ರೆಸ್ ಜಾಣ ಕುರುಡು ಪ್ರದರ್ಶಿಸಿದೆ ಎಂದು ಆರೋಪಿಸಿದರು.

ವಿಸ್ಮಯ ನ್ಯೂಸ್, ಕಾರವಾರ

Exit mobile version