Follow Us On

WhatsApp Group
Focus News
Trending

ಶ್ರೀ ಶಂಭುಲಿಂಗ ದೇವರ ಹಾಗೂ ಪರಿವಾರ ದೇವರುಗಳ ಕಲಾವೃದ್ಧಿ ಮತ್ತು ಮಹಾರುದ್ರ ಕಾರ್ಯಕ್ರಮ

ಕುಮಟಾ : ತಾಲೂಕಿನ ಕತಗಾಲಿನ ಶ್ರೀ ಶಂಭುಲಿಂಗ ದೇವರ ಹಾಗೂ ಪರಿವಾರ ದೇವರುಗಳ ಕಲಾವೃದ್ಧಿ ಮತ್ತು ಮಹಾರುದ್ರ ಕಾರ್ಯಕ್ರಮವು ಇದೇ ಬರುವ ದಿನಾಂಕ ಮೇ 2,3,4 ರಂದು ನಡೆಯಲಿದೆ.2 ಮತ್ತು 3 ನೇ ತಾರೀಖಿನಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

4 ನೇ ತಾರೀಖಿನಂದು ಮಹರುದ್ರ ಹವನದ ಮಹಪೂರ್ಣಹುತಿ, ಬ್ರಹ್ಮ ಕಲಶಭಿಷೇಕ, ಮಹಾ ಮಂಗಳಾರತಿ, ಸಾರ್ವಜನಿಕ ಅನ್ನಸಂತರ್ಪಣೆ ರಾತ್ರಿ ದಕ್ಷ ಯಜ್ಞ ಯಕ್ಷಗಾನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಚಂದವರದ ಶ್ರೀ ಹನುಮಂತ ದೇವರ ಸವಾರಿ ಸಾನಿಧ್ಯ ಇರುತ್ತದೆ.

ಹನುಮಂತ ದೇವರ ಸವಾರಿಯು ಮೇ 7 ರ ವರೆಗೆ ಶಂಭುಲಿಂಗ ದೇವಾಲಯದಲ್ಲಿ ಸಾನಿಧ್ಯವಹಿಸಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಸಾದವನ್ನು ಸ್ವೀಕರಿಸಬಕಾಗಿ ವಿನಂತಿ. ಭಕ್ತಾದಿಗಳು ಅಕ್ಕಿ, ಕಾಯಿ, ಬೇಳೆ, ಕಾಳು ಇತ್ಯಾದಿ ಸುವಸ್ತುಗಳನ್ನು ಸಲ್ಲಿಸಲು ಅವಕಾಶವಿದೆ.

ವಿಸ್ಮಯ ನ್ಯೂಸ್ ಕುಮಟಾ

Back to top button