ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯ”ಕಾರ್ಯಾಗಾರ

ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ. ಘಟಕದಡಿಯಲ್ಲಿ “ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯಗಳು” ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯ ತರಬೇತುದಾರರಾದ ಶ್ರೀ. ಸತೀಶ ಆರ್. ಶೀಘ್ರ ಓದು ಮತ್ತು ಸ್ಮರಣಶಕ್ತಿ ಶಿಕ್ಷಕರಿಗೆ ಬಹಳ ಅವಶ್ಯಕ, ಮಿದುಳಿನ ಎರಡೂ ಭಾಗಗಳನ್ನು ಉಪಯೋಗಿಸಬೇಕು. ಶಿಕ್ಷಕರಾಗುವವರಿಗೆ ಉತ್ಸಾಹ, ಆತ್ಮವಿಶ್ವಾಸ, ತಿಳಿಹಾಸ್ಯ ಗುಣಗಳಿರಬೇಕು, ಆದರ್ಶ ವ್ಯಕ್ತಿತ್ವವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದ ನಂತರ ಶಿಕ್ಷಕವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಕಮಲಾ ಬಾಳಿಗಾ ಶಿಕ್ಷಣ ಮಹಾಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ. ಘಟಕದಡಿಯಲ್ಲಿ “ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯಗಳು” ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯ ತರಬೇತುದಾರರಾದ ಶ್ರೀ. ಸತೀಶ ಆರ್. ಶೀಘ್ರ ಓದು ಮತ್ತು ಸ್ಮರಣಶಕ್ತಿ ಶಿಕ್ಷಕರಿಗೆ ಬಹಳ ಅವಶ್ಯಕ, ಮಿದುಳಿನ ಎರಡೂ ಭಾಗಗಳನ್ನು ಉಪಯೋಗಿಸಬೇಕು. ಶಿಕ್ಷಕರಾಗುವವರಿಗೆ ಉತ್ಸಾಹ, ಆತ್ಮವಿಶ್ವಾಸ, ತಿಳಿಹಾಸ್ಯ ಗುಣಗಳಿರಬೇಕು, ಆದರ್ಶ ವ್ಯಕ್ತಿತ್ವವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದ ನಂತರ ಶಿಕ್ಷಕವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ನೀಡಿದರು.ಕಾರ್ಯಕ್ರಮದ ಅಧ್ಯಕ್ಷರಾಗಿ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶ್ರೀಮತಿ. ಪ್ರೀತಿ ಪಿ. ಭಂಡಾರಕರ ರವರು ಜೀವನದಲ್ಲಿ ಸುಖಕರವಾಗಿ, ಆನಂದದಿಂದ ಜೀವಿಸಬೇಕಾದರೆ ಜೀವನ ಕೌಶಲ್ಯಗಳು ತನ್ನದೇ ಆದ ಮುಖ್ಯ ಪಾತ್ರವನ್ನು ವಹಿಸುತ್ತವೆ ಎಂದರು.

ವೇದಿಕೆಯಲ್ಲಿ ಉತ್ತರಕನ್ನಡ ಖಾಸಗಿ ಶಾಲಾ ಶಿಕ್ಷಕ-ಶಿಕ್ಷಕಿಯರ ನಿರಂತರ ಸಹಾಯವಾಣ ಯ ಅಧ್ಯಕ್ಷರಾದ ಶ್ರೀ. ವಿಶ್ವನಾಥ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ವಿದ್ಯಾರ್ಥಿಸಂಘದ ಉಪಾಧ್ಯಕ್ಷರಾದ ಡಾ. ವಿನಾಯಕ ಕೆ. ಭಟ್ ಸ್ವಾಗತಿಸಿ ಪರಿಚಯಿಸಿದರು. ನಿರ್ಮಲಾ ಮೂರ್ಕಟ್ಟಿ ವಂದಿಸಿದರು. ಸುಷ್ಮಾ ತೋಟಿಗೇರ್ ಕಾರ್ಯಕ್ರಮ ನಿರೂಪಿಸಿದರು.
ಕೆ. ಭಟ್ ಸ್ವಾಗತಿಸಿ ಪರಿಚಯಿಸಿದರು. ನಿರ್ಮಲಾ ಮೂರ್ಕಟ್ಟಿ ವಂದಿಸಿದರು. ಸುಷ್ಮಾ ತೋಟಿಗೇರ್ ಕಾರ್ಯಕ್ರಮ ನಿರೂಪಿಸಿದರು.

ವಿಸ್ಮಯ ನ್ಯೂಸ್ ಕುಮಟಾ

Exit mobile version