ಅಕ್ರಮವಾಗಿ ಗೋವಾ ಸರಾಯಿ ಸಾಗಾಟ: ಆರೋಪಿ ವಶಕ್ಕೆ

ಅಂಕೋಲಾ: ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅಂಕೋಲಾ ಪೊಲೀಸರು ದಾಳಿ ನಡೆಸಿ ಮಾಲು ಸಹಿತ ವ್ಯಕ್ತಿಯನ್ನು ಬಂಧಿಸಿದ ಘಟನೆ ತಾಲೂಕಿನ ಕಲ್ಲೇಶ್ವರ ಕೋನಾಳ ಬಳಿ ನಡೆದಿದೆ.ಕಾರವಾರದ ಕಡವಾಡದ ನಿವಾಸಿ ಶಂಕರ ಗಣಪತಿ ಅಣ್ವೇಕರ (52) ಬಂಧಿತ ವ್ಯಕ್ತಿ.

ಈತ  ಕಲ್ಲೇಶ್ವರದ ಹಳೇ ಕಲ್ಲೇಶ್ವರ ಬಳಿ ಮೋಟಾರು ಸೈಕಲ್ ಮೇಲೆ ಗೋವಾ ರಾಜ್ಯದ ಸುಮಾರು 2640 ರೂಪಾಯಿ ಮೌಲ್ಯದ  750 ಎಂ.ಎಲ್ ನ 24 ಬಾಟಲಿ ಕೋಕೋನಟ್ ಫೆನ್ನಿ  ಮತ್ತು ಸುಮಾರು 7000 ರೂಪಾಯಿ ಮೌಲ್ಯದ ಮೋಟರ್ ಬೈಕ್ ವಶಪಡಿಸಿಕೊಂಡಿದ್ದಾರೆ. ಅಂಕೋಲಾ ಪಿ.ಎಸ್. ಐ ಮಹಾಂತೇಶ ಮತ್ತು ಸಿಬ್ಬಂದಿಗಳಾದ ಸುಬ್ರಾಯ ಭಟ್ಟ, ಶೇಖರ ಸಿದ್ದಿ, ಸತೀಶ ಅಂಬಿಗ  ಕಾರ್ಯಾಚರಣೆ ನಡೆಸಿದ್ದು, ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.                   

ವಿಸ್ಮಯ ನ್ಯೂಸ್ ವಿಲಾಸ  ನಾಯಕ ಅಂಕೋಲಾ

Exit mobile version