ವಾಹನ ಕಳುವು ಪ್ರಕರಣ: ಮೂವರು ಆರೋಪಿಗಳ ಬಂಧನ

ಶಿರಸಿ: ಬೇರೆ ಬೇರೆ ಕಡೆ ವಾಹನಗಳನ್ನು ಕಳುವು ಮಾಡಿದ ಮೂವರು ಆರೋಪಿತರನ್ನು ಬನವಾಸಿ ಠಾಣೆ ಪೊಲೀಸರು ಬಂಧಿಸಿದ್ದು , ಅವರಿಂದ ಕಳುವಾದ ಓಮಿನಿ ವಾಹನ ಜಪ್ತು ಮಾಡಿದ್ದಾರೆ. ಕಳೆದ ಮೇ 11 ರಂದು ಶಿರಸಿ ಕೊರ್ಲಕಟ್ಟಾದಲ್ಲಿ ಮನೆಯ ಹಿಂಭಾಗದಲ್ಲಿ ನಿಲ್ಲಿಸಿದ್ದ ತಮ್ಮ ಓಮ್ನಿ ಕಾರನ್ನು ಕಳುವು ಮಾಡಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಆಗಿ ತಂಡವೊoದನ್ನು ರಚನೆ ಮಾಡಿ ಪ್ರಕರಣದ ಆರೋಪಿತರಾದ ಶಿರಸಿ ಭಾಸ್ಕರ ನಗರ ನಿವಾಸಿ ಪ್ರಸನ್ನ ಗಣಪತಿ ಕುರುಬರ (42) ಹುಲೇಕಲ್ ರಸ್ತೆ ನಿವಾಸಿ ನವೀನ ರಾಮಚಂದ್ರ ಚವ್ಹಾಣ (22), ಗಣೇಶನಗರ ನಿವಾಸಿ ನಿಖಿಲ್ ನಾಗೇಶ ಗೌಡ (27) ಎಂಬುವವರನ್ನು ಬಂಧಿಸಿದ್ದಾರೆ. ಓಮಿನಿ ಕಾರು ಮತ್ತು ಕಳ್ಳತನಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ

Exit mobile version