ಸ್ನೇಹಿತರ ಮನೆಗೆ ಬಟ್ಟೆ ಕೊಟ್ಟು ಬರುವುದಾಗಿ ಹೋದ ವಿದ್ಯಾರ್ಥಿ ನಾಪತ್ತೆ

ಸಿದ್ದಾಪುರ: ಸ್ನೇಹಿತರ ಮನೆಗೆ ಬಟ್ಟೆ ಕೊಟ್ಟು ಬರುವುದಾಗಿ ಹೇಳಿ ಹೋದ ವಿದ್ಯಾರ್ಥಿಯು ಕಾಣೆಯಾಗಿದ್ದು  ಹುಡುಕಿಕೊಡುವಂತೆ ತಂದೆಯು ಠಾಣೆಯಲ್ಲಿ ದೂರು ನೀಡಿದ್ದಾರೆ ಸಿದ್ದಾಪುರದ  ಅವರ್ಗುಪ್ಪ ಕಾಲೇಜಿನಲ್ಲಿ ಡಿಪ್ಲೋಮೋ ಓದುತ್ತಿರುವ ವಿದ್ಯಾರ್ಥಿ ರೋಷನ್ ಮಹೇಶ್ ಆಚಾರಿ  17 ಆನಗೋಡ್ ಯಲ್ಲಾಪುರ  ಕಾಣೆಯಾದ ವಿದ್ಯಾರ್ಥಿ ಯಾಗಿದ್ದಾನೆ.

ಓದಲು ಅವರಗುಪ್ಪ ದಲ್ಲಿ  ಬಾಡಿಗೆ ಮನೆಯಲ್ಲಿ ಇದ್ದ ಈತನು ಸ್ನೇಹಿತನಿಗೆ ಬಟ್ಟೆಕೊಟ್ಟು ಬರುತ್ತೇನೆಂದು ರೂಮ್ ಮಾಲೀಕರಿಗೆ  ಹೇಳಿ ಹೋದವನು ಎಲ್ಲಿಯೋ ಕಾಣೆಯಾಗಿದ್ದಾನೆ  ಗೋಧಿ ಬಣ್ಣ ಸಾಧಾರಣ ಮೈಕಟ್ಟು 5.3 ಅಡಿ ಎತ್ತರ ಹೋಗುವಾಗ ಕೆಂಪು ಬಣ್ಣದ ಚೌಕಳಿ ಫುಲ್ ಶರ್ಟ್  ಮತ್ತು ಪ್ಯಾಂಟ್ ಧರಿಸಿದ್ದು   ಕನ್ನಡ ಮತ್ತು ಕೊಂಕಣಿ ಮಾತನಾಡುತ್ತಾನೆ.

ವಿಸ್ಮಯ ನ್ಯೂಸ್, ದಿವಾಕರ ನಾಯ್ಕ, ಸಿದ್ದಾಪುರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version