ಬಿಜೆಪಿ ಯುವಮೊರ್ಚಾ ಹಾಗೂ ಬಿಜೆಪಿ ಮಂಡಲದ ವತಿಯಿಂದ ದೇವಾಲಯದ ಕಲ್ಯಾಣಿ ಸ್ವಚ್ಛತಾ ಕಾರ್ಯ

ಹೊನ್ನಾವರ: ಬಿಜೆಪಿ ಯುವಮೊರ್ಚಾ ಹಾಗೂ ಬಿಜೆಪಿ ಮಂಡಲದ ವತಿಯಿಂದ ದಿಬ್ಬಣಗಲ್ ಶ್ರೀ ವಿನಾಯಕ ಸೂರ್ಯನಾರಾಯಣ ದೇವಾಲಯದ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮದ ಯಶಸ್ವಿಯಾಗಿ ನೆರವೇರಿತು.

ಪುರಾಣ ಪ್ರಸಿದ್ದ ದೇವಾಲಯವಾಗಿರುವ ಈ ಸ್ಥಳದಲ್ಲಿ ದೇವಾಲಯದ ಸುತ್ತಮುತ್ತಲೂ ಕಾಡು ಜಾತಿ ಗಿಡಗಳು ಬೆಳೆದು ಕಲ್ಯಾಣಿ ಮುಚ್ಚಿ ಹೋಗಿತ್ತು. ಇಂದು ಮುಂಜಾನೆಯಿಂದ ಮಧ್ಯಾಹ್ನದವರೆಗೂ ಸ್ವಚ್ಚತಾ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ನಾಯ್ಕ, ಹೊನ್ನಾವರ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೀಧರ ನಾಯ್ಕ ಮಂಕಿ,ಯುವಮೋರ್ಚಾ ತಾಲೂಕಾ ಅಧ್ಯಕ್ಷರಾದ ಸಚಿನ ಶೇಟ್,ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಜೋಶಿ, ಕಾರ್ಯದರ್ಶಿಗಳಾದ ಶಿವಾನಂದ ಮರಾಠಿ, ನಾಗರಾಜ ಬೈಲಗದ್ದೆ, ಸದಸ್ಯರಾದ ವೇಣುಗೋಪಾಲ ನಾಯ್ಕ, ಶೈಲೇಶ್ ನಾಯ್ಕ,ಪ್ರದೀಪ ನಾಯ್ಕ,ತಿಲಕ ನಾಯ್ಕ, ರಮೇಶ ನಾಯ್ಕ ಹಾಜರಿದ್ದರು,

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Exit mobile version