ಹೆಸ್ಕಾಂ ಸಿಬ್ಬಂದಿಯ ವಸತಿ ಗೃಹಕ್ಕೆ ಬಂದ ಹಾವು: ಉರಗತಜ್ಞನ ಯಶಸ್ವಿ ಕಾರ್ಯಾಚರಣೆ

ದಾಂಡೇಲಿ: ಆಹಾರವನ್ನರಸಿ ನಾಡಿಗೆ ಬಂದ ಹಾವೊಂದು ನಗರದ ಹೆಸ್ಕಾಂ ಸಿಬ್ಬಂದಿಯ ವಸತಿ ಗೃಹವೊಂದರೊಳಗೆ ಬಂದ ಘಟನೆ ನಗರದ ಕೆ.ಸಿ ವೃತ್ತ ಸಮೀಪದಲ್ಲಿ ನಡೆದಿದೆ. ಹೆಸ್ಕಾಂ ಸಿಬ್ಬಂದಿ ಮಂಜುನಾಥ ನಾಯ್ಕ ಅವರ ಮನೆಯೊಳಗಡೆ ಆಕಸ್ಮಿಕವಾಗಿ ಹಾವೊಂದು ಬಂದು ಮನೆ ಮಂದಿಯನ್ನೆಲ್ಲ ಭಯಭೀತರನ್ನಾಗಿಸಿತು.

ಕೂಡಲೆ ಮಂಜುನಾಥ ನಾಯ್ಕ ಅವರು ನಗರದ ಉರಗ ಪ್ರೇಮಿ ರಾಘವೇಂದ್ರ ವಿ.ನಾಯಕರವರನ್ನು ಸ್ಥಳಕ್ಕೆ ಕರೆಸಿದರು. ಸ್ಥಳಕ್ಕಾಗಮಿಸಿದ ರಾಘವೇಂದ್ರ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಮರಳಿ ಕಾಡಿಗೆ ಬಿಟ್ಟು ಬಂದು ವನ್ಯ ಕಾಳಜಿಯನ್ನು ಮೆರೆದಿದ್ದಾರೆ.

Exit mobile version