ಮತಗಳು ಬರುತ್ತವೆ ಎಂಬ ವಿಶ್ವಾಸದಲ್ಲೇ 2ನೇ ಅಭ್ಯರ್ಥಿಯನ್ನು ನಿಲ್ಲಿಸಿದ್ದೇವೆ: ದೇಶಪಾಂಡೆ

ಶಿರಸಿ:ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಕಣಕ್ಕಿಳಿಸುವಾಗ ಮತಗಳು ಬರುತ್ತವೆ ಎಂಬ ವಿಶ್ವಾಸದಲ್ಲೇ ಅಭ್ಯರ್ಥಿಯನ್ನು ನಿಲ್ಲಿಸಿರುತ್ತೇವೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಗೆಲ್ಲಿಸುವ ತಂತ್ರಗಾರಿಕೆಯಲ್ಲೆ ನಿಲ್ಲಿಸುತ್ತೇವೆ. ನಮ್ಮ ಮತಗಳು ಕಡಿಮೆ ಇದ್ದರೂ ಕೆಲವು ಬಾರಿ ವ್ಯತ್ಯಾಸ ಆಗಬಹುದು. ಅದೆನೇ ಇದ್ದರೂ ನಾಮಪತ್ರ ಸಲ್ಲಿಸಿದವರಲ್ಲಿ ಯಾರು ವಾಪಸ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣ, ಇಲ್ಲದಿದ್ದರೆ ಜೂನ್ ೧೦ಕ್ಕೆ ಫಲಿತಾಂಶ ಬರುತ್ತದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ವಿಸ್ಮಯ ನ್ಯೂಸ್,‌ ಶಿರಸಿ

Exit mobile version