13 ಅಡಿ ಉದ್ದದ ಗರ್ಭಿಣಿ ಕಾಳಿಂಗ ಸರ್ಪ ಹಿಡಿದು ಕಾಡಿಗೆ : ಮನೆಗಳ ಸಮೀಪ ಓಡಾಡಿ ಭಯಹುಟ್ಟಿಸಿದ್ದ ಹಾವು

ಶಿರಸಿ: ತಾಲೂಕಿನ ಸೋಂದಾ ಬಾಡಲಕೊಪ್ಪದ ರತ್ನಾಕರ ಹೆಗಡೆಯವರ ಮನೆಯ ಸಮೀಪದ ನೀರುಳ್ಳೆ ಕೆರೆಯ ಬಳಿ ಕಳೆದೆರಡು ದಿನಗಳಿಂದ ಓಡಾಡುತ್ತಿದ್ದ ಕಾಳಿಂಗ ಸರ್ಪವನ್ನ ಹಿಡಿದು, ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ. ಗ್ರಾಮದ ಮನೆಗಳ ಬಳಿ ಹಾವು ಓಡಾಡುತ್ತಿದ್ದ ಕಾರಣ ಭಯಭೀತಗೊಂಡಿದ್ದ ಸ್ಥಳೀಯರು ಉರಗಪ್ರೇಮಿಗಳಾದ ಪ್ರಶಾಂತ್ ಹುಲೇಕಲ್ ಹಾಗೂ ಮಾಜ್ ಅಹಮದ್ ಅವರ ತಂಡಕ್ಕೆ ಕರೆಮಾಡಿ ಸ್ಥಳಕ್ಕೆ ಕರೆಯಿಸಿದ್ದರು.

ಸ್ಥಳಕ್ಕೆ ಬಂದ ಈ ತಂಡ ಕೆಲ ನಿಮಿಷಗಳವರೆಗೆ ಕಾರ್ಯಾಚರಣೆ ನಡೆಸಿ ಕಾಳಿಂಗವನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 13 ಅಡಿ ಉದ್ದದ ಈ ಕಾಳಿಂಗ ಗರ್ಭಿಣಿಯಾಗಿರುವುದು ಅದನ್ನ ಹಿಡಿದ ಬಳಿಕ ಗಮನಕ್ಕೆ ಬಂದಿದೆ. 10- 15 ಮೊಟ್ಟೆಗಳು ಹಾವಿನ ಉದರದಲ್ಲಿದ್ದು, ಇನ್ನು 50 ದಿನಗಳಲ್ಲಿ ಮೊಟ್ಟೆಗಳನ್ನಿಡಬಹುದು. ಅದಕ್ಕಾಗಿ ಜಾಗದ ವ್ಯವಸ್ಥೆ ಮಾಡಿಕೊಳ್ಳುತ್ತಿರುವುದಾಗಿ ಪ್ರಶಾಂತ್ ಹುಲೇಕಲ್ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version