ಸಿಮೆಂಟ್ ತುಂಬಿಕೊಡು ಹೋಗುತ್ತಿದ್ದ ಲಾರಿ ಪಲ್ಟಿ: ಮೂವರಿಗೆ ಗಾಯ

ಸಿದ್ದಾಪುರ: ಸಿಮೇಂಟ್ ತುಂಬಿಕೊoಡು ಬರುತ್ತಿದ್ದ ಲಾರಿ ಪಲ್ಟಿಯಾಗಿ ಚಾಲಕ ಸಹಿತ ಮೂವರು ಗಾಯಗೊಂಡ ಘಟನೆ ತಾಲೂಕಿನ ವಾಜಗದ್ದೆ ಸಮೀಪದ ವಾಟೆಹಕ್ಲ ತಿರುವಿನಲ್ಲಿ ನಡೆದಿದೆ. ಹದಿನಾರನೇ ಮೈಲಕಲ್ ಕಡೆಯಿಂದ ಹಾರ್ಸಿಕಟ್ಟಾ ಕಡೆಗೆ ಬರುತ್ತಿದ್ದ ಲಾರಿ, ಅತಿವೇಗವಾಗಿ ಹಾಗೂ ಚಾಲಕನ ನಿರ್ಲಕ್ಷತನದಿಂದ ಪಲ್ಟಿಯಾಗಿದೆ ಎನ್ನಲಾಗಿದೆ.

ಲಾರಿ ಚಾಲಕ ಕುಮಾರ್ ಚನ್ನಪ್ಪ ರಾಮಾವತ್ ಅವರಿಗೆ ಹಾಗೂ ಹಮಾಲಿಗಳಾದ ಸೋಮಶೇಖರ ಕಾಳಾ ನಾಯ್ಕ ಬಾಲಿಕೊಪ್ಪ, ನೀಲಕಂಠ ನಾರಾಯಣ ಅಂಬಿಗ ಸಿದ್ದಾಪುರ, ಶೇಖರ ಶಿವಾ ಅಂಬಿಗ ಸಿದ್ದಾಪುರ ಇವರಿಗೆ ಸಣ್ಣ ಪುಟ್ಟ ಪೆಟ್ಟು ಬಿದ್ದಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version