Important
Trending

ಸೇತುವೆ ಅಂಚಿನಿಂದ ಹಳ್ಳಕ್ಕೆ ಬಿದ್ದ ಲಾರಿ: ಚಾಲಕ ಪರಾರಿ ? ಮುಂಬೈಯಿಂದ ಕೇರಳಕ್ಕೆ ಹೊರಟಿದ್ದ ಲಾರಿಯಲ್ಲೇನಿತ್ತು ? 

ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿದ ಭಾರಿ ವಾಹನವೊಂದು ಹೆದ್ದಾರಿಗೆ ಸಂಪರ್ಕ ಹೊಂದಿರುವ ಮೇಲ್ಸೇತುವೆ ಪಕ್ಕದಿಂದ ಹಳ್ಳಕ್ಕೆ ಬಿದ್ದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರ ಅಂಕೋಲಾ – ಕುಮಟಾ ಮಾರ್ಗಮಧ್ಯೆ ಚಂದುಮಠ ಬೆಳೆಸೆ ಪ್ರಾಪ್ತಿಯಲ್ಲಿ ನಡೆದಿದೆ.

ಡಿನ್ನರ್ ಸೆಟ್, ಗ್ಲಾಸ್ ಸೆಟ್, ಪ್ಯಾಸ್ಟಿಕ್ ಬ್ಯಾಗ್ ಮತ್ತಿತರ ಸಾಮಾನುಗಳನ್ನು ಹೊತ್ತು  ಮುಂಬೈಯಿಂದ ಕ್ಯಾಲಿಕಟ್ ಗೆ ಸಾಮಾನುಗಳನ್ನು ಸಾಗಿಸುತ್ತಿದ್ದ ಈ ಲಾರಿ ಬೆಳೆಸೆ ಬ್ರಿಜ್ ಬಳಿ ಅದಾವುದೋ ಕಾರಣದಿಂದ ಚಾಲಕನ ನಿಯಂತ್ರಣ ತಪ್ಪಿ ಬಲಗಡೆ ಮಗ್ಗುಲಿಗೆ ಹೊರಳಿ ಹಳ್ಳದಲ್ಲಿ ಮುಗ್ಗರಿಸಿದೆ. ಲಾರಿಯ ಮುಂಭಾಗ ಚಚ್ಚಿ ಹೋಗಿದ್ದು ,ಲಾರಿಯಲ್ಲಿದ್ದ ಹಲವು ಸಾಮಾನುಗಳಲ್ಲ., ಚೆಲ್ಲಾಪಿಲ್ಲಿಯಾಗಿದೆ.

ಲಾರಿ ಚಾಲಕ ಸ್ಥಳದಿಂದ ಓಡಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದ್ದು,ಆತನ ಜೊತೆ ಇದ್ದ ಸಹಾಯಕ ಡ್ರೈವರ್ ಇಲ್ಲವೇ ಕ್ಲೀನರ್  ಗಾಯಾಳುವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.112 ತುರ್ತು ವಾಹನ ಸಿಬ್ಬಂದಿಗಳು , ಐಆರ್ ಬಿ ಸಿಬ್ಬಂದಿಗಳು ಆಗಮಿಸಿದ್ದಾರೆ.ಪಿಎಸ್ಐ ಪ್ರವೀಣ ಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಪಘಾತಕ್ಕೆ ಸಂಬಂಧಿಸಿದ ಹಾಗೂ ಗಾಯಾಳುಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button