ಅಂಗಡಿ ಕಳ್ಳತನ ಪ್ರಕರಣ: ಮೂವರನ್ನು ಬಂಧಿಸಿದ ಪೊಲೀಸರು

ಮುಂಡಗೋಡ: ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಮೂವರನ್ನು ಬಂಧಿಸಿದ್ದಾರೆ. ಶಿರಸಿಯ ಸಲೀಮ್ ಅನ್ವರ್ ಸಾಬ್, ಅಬ್ದುಲ್ ಸತ್ತಾರ್ ಮುಲ್ಲಾ ಹಾಗೂ ಇರ್ಫಾನ್ ಶೇಖ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಮೇ 20 ರಂದು ರಾತ್ರಿ ಮಳಗಿ ಗ್ರಾಮದ ಕಾಳೆಬೈಲ್ ಹೊಸಕೊಪ್ಪ ಗ್ರಾಮದಲ್ಲಿ ಕಳ್ಳತನ ನಡೆದಿತ್ತು. ಅಂಗಡಿಯ ಶೀಟ್ ತೆಗೆದು ಕಳ್ಳತು, ಹಿಂದಿನ ಬಾಗಿಲಿನಿಂದ ಕಿರಾಣಿ ವಸ್ತು ಹಾಗೂ ಫ್ರಿಡ್ಜ್ ಸಮೇತ ಸುಮಾರು 63 ಸಾವಿರ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಖಚಿತ ಸುಳಿವಿನ ಮೇರೆಗೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಪಿಐ ಎಸ್.ಎಸ್.ಸಿಮಾನಿ, ಪಿಎಸೈಗಳಾದ ಬಸವರಾಜ ಮಬನುರ್, ಎನ್.ಡಿ.ಜಕ್ಕಣ್ಣವರ, ಎಎಸ್ಐ ಮಣಿ ಮಾಲನ್ ಮೇಸ್ತ್ರಿ, ಸಿಬ್ಬಂದಿ ರಾಜೇಶ ನಾಯ್ಕ, ಗಣಪತಿ ಹುನ್ನಳ್ಳಿ, ವಿನೋದಕುಮಾರ, ಮಾರುತಿ ಮಾಳಗಿ, ತಿರುಪತಿ ಚೌಡಣ್ಣನವರ, ಅಣ್ಣಪ್ಪ ಬುಡಿಗೇರ, ಬಸವರಾಜ ಲಮಾಣಿ, ಪ್ರಕಾಶ ಶ್ರಿಂಗೇರಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಕಾರವಾರ

Exit mobile version