ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಸಿದ್ದಾಪುರ ವಿದ್ಯಾರ್ಥಿಗಳ ಸಾಧನೆ

ಸಿದ್ದಾಪುರ: ಕೇರಳದ ತಿರುವನಂತಪುರದಲ್ಲಿ ಇತ್ತೀಚೆಗೆ ನಡೆದ 17ನೇ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಸಿದ್ದಾಪುರದ ಐಡಿಯಲ್ ಪ್ಲೇ ಅಬಾಕಸ್ ಸೆಂಟರ್‌ನಿoದ 10 ಮಕ್ಕಳು ಭಾಗವಹಿಸಿದ್ದು, ಉತ್ತಮ ಸಾಧನೆ ಮಾಡಿದ್ದಾರೆ. ವೇದಾಂತ್ ಆರ್. ಭಟ್, ಭರತ್ ಬಿ. ಪಟೇಲ್ ಪ್ರಥಮ, ತನ್ಮಯ ಎಂ.ವಿ.ದ್ವಿತೀಯ, ಸುಚೇತ್ ಸಿ.ಎಚ್, ಸಂಕೇತ್ ಆರ್. ಹೆಗಡೆ, ತೃತೀಯ, ಲಿಖಿತ್, ಹರ್ಷಿತಾ ಎಸ್. ಪಟಗಾರ ನಾಲ್ಕನೇ ಸ್ಥಾನ, ಮನೀಷ ಆರ್. ಭಟ್, ಪ್ರಣವ್ ಎಂ. ಭಟ್ ಐದನೇ ಸ್ಥಾನ, ಸಮರ್ಥ ಆರ್. ಹೆಗಡೆ ಸಮಾಧಾನಕರ ಬಹುಮಾನವನ್ನು ಪಡೆದಿದ್ದಾರೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version