ನಾಪತ್ತೆಯಾಗಿದ್ದ ಶಿಕ್ಷಕರೊಬ್ಬರ ಶವ 21 ದಿನಗಳ ಬಳಿಕ ಅರೆ ಜೀರ್ಣಾವಸ್ಥೆಯಲ್ಲಿ ಪತ್ತೆ

ಕಾರವಾರ: ನಾಪತ್ತೆಯಾಗಿದ್ದ ಮುಂಡಗೋಡಿನ ಖಾಸಗಿ ಶಾಲೆಯ ಶಿಕ್ಷಕರೊಬ್ಬರ ಶವ 21 ದಿನಗಳ ಬಳಿಕ ತಾಲೂಕಿನ ಕುಂದರಗಿ ಕ್ರಾಸ್ ಬಳಿ ಅರೆ ಜೀರ್ಣಾವಸ್ಥೆಯಲ್ಲಿ ಪತ್ತೆಯಾಗಿದೆ. ಆನಂದ ಕಡಗಿ ಮೃತಪಟ್ಟ ಶಿಕ್ಷಕ. ಮೇ 29 ರಂದು ಬೆಳಗ್ಗೆ 11 ಗಂಟೆಗೆ ಅವರು ಉಟ್ಟ ಬಟ್ಟೆಯಲ್ಲೇ ಮನೆ ಬಿಟ್ಟು ಹೋಗಿದ್ದು ನಂತರ ನಾಪತ್ತೆಯಾಗಿದ್ದರು.

ನಾಪತ್ತೆಯಾದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಷ್ಟು ದಿನದ ನಂತರವೂ ಆನಂದ ಕಡಗಿ ಮೃತದೇಹ ಸಂಪೂರ್ಣ ಜೀರ್ಣವಾಗಿಲ್ಲ. ಯಾವುದೇ ಪ್ರಾಣಿಗಳು ಸಹ ಮೃತದೇಹವನ್ನು ಪ್ರಾಣಿಗಳು ತಿಂದ ಕುರುಹುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಸಾವಿನ ಬಗ್ಗೆ ಹಲವು ಸಂದೇಹಗಳು ವ್ಯಕ್ತವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version