ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಬಿದ್ದ ಮರ: ಚಿಕಿತ್ಸೆಗೆ ಫಲಿಸದೆ ಸಾವು

ಸಿದ್ದಾಪುರ: ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಮರ ಬಿದ್ದು ಗಾಯವಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ತಾಲೂಕಿನ ಅಬ್ಬಿಗದ್ದೆ ಶಿವಳಮನೆಯಲ್ಲಿ ನಡೆದಿದೆ. ಶ್ರೀಧರ್ ನಾರಾಯಣ ಹೆಗಡೆ ಮೃತ ದುರ್ದೈವಿ.

ತೋಟದ ಕೆಲಸಕ್ಕೆ ಹೋದ ನಾರಾಯಣ ಹೆಗಡೆ ತೋಟದ ಕಾಲುವೆಯನ್ನು ಸ್ವಚ್ಛಗೊಳಿಸುತ್ತ ಕೃಷಿ ಕೆಲಸ ತೊಡಗಿಕೊಂಡಿದ್ದಾಗ ತೋಟದ ಬದಿಗೆ ದಿಬ್ಬದ ಮೇಲಿದ್ದ ಮರವು ಮಳೆಯಿಂದ ಬುಡ ನೆನೆದು ಬುಡಸಮೇತ ಕಿತ್ತು ಜಾರಿ ಬಂದು ಕೆಲಸ ಮಾಡುತ್ತಿದ್ದ ಶ್ರೀಧರ್ ರವರ ಮೇಲೆ ಬಿದ್ದಿದ್ದರಿಂದ ಮಾರಣಾಂತಿಕ ಗಾಯವಾಗಿತ್ತು. ಸಿಟಿ ಸ್ಕ್ಯಾನ್ ಆಸ್ಪತ್ರೆಗೆ ದಾಖಲು ಮಾಡಿದರೂ ಸಹ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ದೂರು ದಾಖಲಾಗಿದೆ . ಪ್ರಕರಣ ದಾಖಲಿಸಿಕೊಂಡ ಸಿದ್ದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version