ಹೃದಯಾಘಾತದಿಂದ ಕಾರು ಚಲಾಯಿಸುತ್ತಿರುವಾಗಲೇ ಚಾಲಕ ಸಾವು

ಕಾರವಾರ: ಹೃದಯಾಘಾತದಿಂದ ಕಾರು ಚಲಾಯಿಸುತ್ತಿರುವಾಗಲೇ ಚಾಲಕನೋರ್ವ ಮೃತಪಟ್ಟ ಘಟನೆ ನಗರದ ಹಬ್ಬುವಾಡ ರಸ್ತೆಯ ವರ್ಚುವಲ್ ಪ್ಯಾರಡೈಸ್ ಅಪಾರ್ಟಮೆಂಟ್ ಬಳಿ ನಡೆದಿದೆ. ಗಜಾ ಬಾಂದೇಕರ(68) ಮೃತಪಟ್ಟ ಕಾರು ಚಾಲಕ ಎಂದು ತಿಳಿದುಬಂದಿದೆ. ಇವರಿಗೆ ಕೆಲ ದಿನಗಳ ಹಿಂದೆ ಬೈಪಾಸ್ ಸರ್ಜರಿ ಸಹ ಎನ್ನಲಾಗಿದೆ.

ಇಲ್ಲಿನ ಪ್ರಸಿದ್ಧ ವೈದ್ಯ ಡಾ. ಅನ್ವಿತ್ ನಾಯಕ ಅವರ ಮನೆಯಲ್ಲಿ ಕಾರು ಚಾಲಕನಾಗಿ ಗಜಾ ಬಾಂದೇಕರ ಕೆಲಸ ಮಾಡುತ್ತಿದ್ದ. ಕಾರು ಚಲಾಯಿಸಿಕೊಂಡು ಹಬ್ಬುವಾಡ ರಸ್ತೆಯಲ್ಲಿ ಸಾಗುತ್ತಿರುವಾಗ ಹೃದಯಾಘಾತವಾಗಿದೆ. ಹೃದಯಾಘಾತವಾದ ಹಿನ್ನಲೆಯಲ್ಲಿ ಪಕ್ಕದಲ್ಲೇ ಇದ್ದ ಕಾಂಪೌoಡ್ ಗೆ ಕಾರನ್ನ ಚಾಲಕ ಗುದ್ದಿದ್ದಾನೆ. ತಕ್ಷಣ ಸ್ಥಳೀಯರು ಕಾರನ್ನ ತೆಗೆದು ಗಮನಿಸಿದಾಗ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version