ಅಪರಿಚಿತ ವ್ಯಕ್ತಿಯ ಕಾಲಿಗೆ ಗಾಯವಾಗಿ ಹುಳ: ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಪೊಲೀಸರು

ಕಾರವಾರ: ಅಪರಿಚಿತ ವ್ಯಕ್ತಿಯ ಕಾಲಿಗೆ ಗಾಯವಾಗಿ,‌ಹುಳುವಾಗಿದ್ದು, ಮಾನಸಿಕ ಅಸ್ವಸ್ಥನಂತೆ ಕೆಲ ದಿನಗಳಿಂದ ತಿರುಗಾಡುತ್ತಿದ್ದ. ಈತನನ್ನು ಆಸ್ಪತ್ರೆಗೆ ದಾಖಲಿಸಿ ಕದ್ರಾ ಠಾಣಾ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಹೌದು, ಅಪರಿಚಿತ ವ್ಯಕ್ತಿಯೊಬ್ಬ ಕಳೆದ ಅನೇಕ ದಿನಗಳಿಂದ ಕದ್ರಾಭಾಗದಲ್ಲಿ ಮಾನಸಿಕ ಅಸ್ವಸ್ಥನಂತೆ ತಿರುಗಾಡುತ್ತಿದ್ದ. ಈತನ ಕಾಲಿಗೆ ಗಾಯವಾಗಿದ್ದಲ್ಲದೆ‌ ಕಾಲಿನಲ್ಲಿ ಹುಳುಗಳಾಗಿದ್ದವು. ಈತನನ್ನು ಮುಟ್ಟಲು ಸ್ಥಳೀಯರು ಹೆದರುತ್ತಿದ್ದರು.

ಸ್ಥಳೀಯರ ಮನವಿಯ ಮೇರೆಗೆ ಮಾಧವ ನಾಯಕ ಅವರು ಕದ್ರಾ ಸಿಪಿಐ ಗೋವಿಂದ ದಾಸರಿಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೂಡಲೇ ಸ್ಪಂದಿಸಿದ ಪೊಲೀಸರು ಸ್ಥಳಕ್ಕೆ ತೆರಳಿ ಆಸ್ಪತ್ರೆಗೆ ಸೇರಿಸಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Exit mobile version