Follow Us On

WhatsApp Group
Focus News
Trending

ಹೊನ್ನಾವರ ನಗರ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಶೇಖರಚಾರೋಡಿ ನೇಮಕ

ಹೊನ್ನಾವರ: ಪಟ್ಟಣದ ಕೆಳಗಿನ ಪಾಳ್ಯಾ ನಿವಾಸಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ , ಪ್ರಾಮಾಣಿಕಕಾರ್ಯಕರ್ತ ಹೊನ್ನಾವರ ನಗರಘಟಕದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ, ಚಂದ್ರಶೇಖರ ಹರಿಚಾರೋಡಿಯವರನ್ನು ಹೊನ್ನಾವರ ನಗರಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಹೊನ್ನಾವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಈವರೆಗೆ ಹೊನ್ನಾವರ ನಗರ ಘಟಕದ ಅಧ್ಯಕ್ಷರಾಗಿ ಉತ್ತಮವಾಗಿ, ಅತ್ಯಂತ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಿದ್ದ, ಕೇಶವ ಲಕ್ಷಣ ಮೇಸ್ತ ಇವರನ್ನು ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್‌ ಇoಟೆಕ್ ಕಾರ್ಯದರ್ಶಿಯಾಗಿ ನೇಮಿಸಿದ್ದರಿಂದ, ಅವರಿಂದತೆರವಾದ ಸ್ಥಾನಕ್ಕೆ ಚಂದ್ರಶೇಖರ ಹರಿಚಾರೋಡಿ ಅವರನ್ನು ನೇಮಿಸಲಾಗಿದೆ ಎಂದು ಜಗದೀಪಎನ್. ತೆಂಗೇರಿ ಹೇಳಿದ್ದಾರೆ.

ನಿನ್ನೆ ಹೊನ್ನಾವರ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ನಡೆದ ತುರ್ತು ಸಭೆಯಲ್ಲಿ ಹಿಂದಿನ ಅಧ್ಯಕ್ಷ ಕೇಶವ ಮೇಸ್ತ ಅವರು ಚಂದ್ರಶೇಖರಚಾರೋಡಿಯವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹೊನ್ನಾವರ ಬ್ಲಾಕ್‌ಕಾಂಗೆಸ್‌ಅಲ್ಪಸoಖ್ಯಾತಘಟಕದ ಅಧ್ಯಕ್ಷಜಿಕ್ರಿಯಾ ಶೇಖ್, ಹೊನ್ನಾವರ ಬ್ಲಾಕ್‌ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದಅಧ್ಯಕ್ಷ ಕೃಷ್ಣ ಹರಿಜನ, ಸಾಮಾಜಿಕಜಾಲತಾಣದಅಧ್ಯಕ್ಷ ಸುಭಾಷ ಮೇಸ್ತ, ಪಕ್ಷದ ಹಿರಿಯ ಮುಖಂಡರಾದಜೋಸೆಪ್‌ಡಿಸೋಜಾ, ಹನೀಪ್ ಶೇಖ್, ನೆಲ್ಸನ್‌ರೊಡ್ರಗಿಸ್, ಮಾದೇವ ನಾಯ್ಕ, ಮನ್ಸೂರ್ ಶೇಖ್, ನವೀನ್‌ಡಿಸೋಜಾ, ಕೃಷ್ಣ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button