Important
Trending

ಅಗ್ನಿವೀರ ಆಕಾಂಕ್ಷಿಗಳೊಂದಿಗೆ ಕಾರ್ಗಿಲ್ ವಿಜಯ ದಿವಸ ಆಚರಣೆ: ಭಾರತ ಮಾತೆಗೆ ಪುಷ್ಪಾರ್ಚನೆ

ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಸಿಹಿಯನ್ನು ಹಂಚುವದರ ಮೂಲಕ ಆಚರಣೆ

ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಆಚರಣೆಯನ್ನು ಬಾಳಿಗಾ ಕಾಲೇಜಿನ ಮೈಧಾನದಲ್ಲಿ ಅಗ್ನಿವೀರರಾಗಿ ಸೈನ್ಯಕ್ಕೆ ಸೇರುವ ಕನಸನ್ನು ಹೊತ್ತ ಅಭ್ಯರ್ಥಿಗಳೊಂದಿಗೆ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಸಿಹಿಯನ್ನು ಹಂಚುವದರ ಮೂಲಕ ಆಚರಿಸಲಾಯಿತು.

ಕುಮಟಾದ ನಿವೃತ್ತ ಸೈನಿಕರಾದ ಶ್ರೀ ನವೀನ ನಾಯ್ಕ ಸರ್ ಹಾಗೂ ನಿವೃತ್ತ ಸೈನಿಕರ ತಂಡದಿಂದ ಯೋಧರಾಗಲು ಹಂಬಲವಿರುವ ಅಭ್ಯರ್ಥಿಗಳಿಗೆ ದೈಹಿಕ ಕಸರತ್ತನ್ನು ಮಾಡಿಸುತ್ತಿದ್ದು ಸುಮಾರು 80 ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿ ತರಬೇತಿ ಪಡೆಯುತ್ತಿದ್ದಾರೆ. ಇವರೆಲ್ಲರ ಕನಸುಗಳು ನನಸಾಗಲೆಂದು ಕುಮಟಾದಿಂದ ಹೆಚ್ಚು ಅಭ್ಯರ್ಥಿಗಳು ಸೈನ್ಯಕ್ಕೆ ಸೇರಲೆಂದು ಯುವಾ ಬ್ರಿಗೇಡ್ ಕಡೆಯಿಂದ ಶುಭ ಹಾರೈಕೆಗಳು. ಯಾರದ್ದರೂ ಈ ತರಬೇತಿಯಲ್ಲಿ ಭಾಗವಹಿಸುವವರಿದ್ದರೆ ಸಂಪರ್ಕಿಸಿ; 9401735066

Back to top button