Focus News
Trending

ಜಮೀನು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿದ ಕರಡಿ: ಗಂಭೀರ ಗಾಯ

ಭಟ್ಕಳ: ಜಮೀನು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವ್ಯಕ್ತಿ ಮೇಲೆ ಎರಡು ಕರಡಿಗಳು ದಾಳಿ ಮಾಡಿರುವ ಘಟನೆ ಉತ್ತರಕೊಪ್ಪ ಚಿಕ್ಕನಳ್ಳಿಯಲ್ಲಿ ನಡೆದಿದೆ. ಕರಡಿ ದಾಳಿಯೊಳಗಾದ ವ್ಯಕ್ತಿಯನ್ನು ರಾಮಚಂದ್ರ ನಾರಾಣಯ ನಾಯ್ಕ ಎಂದು ತಿಳಿದು ಬಂದಿದೆ. ಈತ ತನ್ನ ಜಮೀನಿನಲ್ಲಿ ಕೆಲಸ ಮುಗಿಸಿ ಉತ್ತರಕೊಪ್ಪ ಚಿಕ್ಕನಳ್ಳಿಯಲ್ಲಿನ ತನ್ನ ಮನೆಗೆ ಕಾಲು ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಏಕಾಏಕಿ ಎರಡು ಕರಡಿಗಳು ಈತನ ಮೇಲೆ ದಾಳಿ ನಡೆಸಿದೆ.

ಉತ್ತರಕನ್ನಡದ ಜೇನುಕೃಷಿಕನನ್ನು ಶ್ಲಾಘಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

ನಂತರ ಎರಡು ಕರಡಿಯೊಂದಿಗೆ ಹೋರಾಡಿ ಅಲ್ಲಿಂದ ತಪ್ಪಿಸಿಕೊಂಡು ಬಂದ ಈತನನ್ನು ಅಲ್ಲಿನ ಸ್ಥಳೀಯರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಕರಡಿ ದಾಳಿಯಿಂದಾಗಿ ವ್ಯಕ್ತಿಯ ತಲೆ, ಕೈ ಕಾಲು ಹಾಗೂ ಕಾಲಿನ ತೊಡೆ ಭಾಗದಲ್ಲಿ ತೀವ್ರವಾದ ಗಾಯಗಳಾಗಿದೆ. ಸದ್ಯ ಕರಡಿದಾಳಿಗೊಳಗಾದ ವ್ಯಕ್ತಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button