Important
Trending

ಹೊಂಡ‌ ತಪ್ಪಿಸಲು ಹೋಗಿ ಅವಾಂತರ: ಲಾರಿಗಳ‌ ಡಿಕ್ಕಿ: ಓರ್ವ ಸಾವು

ಯಲ್ಲಾಪುರ: ಲಾರಿಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ತಾಲೂಕಿನ ಹಿಟ್ಟಿನಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಮಹಾರಾಷ್ಟ್ರದ ಪರಮೇಶ್ವರ ಲಕ್ಷಣ ದಖಲವಾಡ (25) ಎಂದು ತಿಳಿದುಬಂದಿದೆ. ಮೂವರು ಗಾಯಗೊಂಡಿದ್ದಾರೆ.

ಕಾರು ಅಪಘಾತ: ನಿಶ್ಚಿತಾರ್ಥವಾಗಿದ್ದ ಯುವಕ ಸಾವು

ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಲಾರಿಯ ಚಾಲಕ, ಹೆದ್ದಾರಿಯಲ್ಲಿನ ಹೊಂಡ ತಪ್ಪಿಸಲು ಹೋದಾಗ ಎದುರಿನಿಂದ ಬಂದ ಲಾರಿ ಡಿಕ್ಕಿ‌ಹೊಡೆದಿದೆ. ಇದರಿಂದಾಗಿ ಎರಡೂ ಲಾರಿಗಳು ರಸ್ತೆಗೆ ಬದಿಯಲ್ಲಿ ಹೋಗಿ ಜಖಂಗೊಂಡಿದೆ.

ವಿಸ್ಮಯ ನ್ಯೂಸ್ ಯಲ್ಲಾಪುರ

Related Articles

Back to top button