ಮನೆ ಬಾಗಿಲು ಮುರಿದು ಚಿನ್ನಾಭರಣ,‌ನಗದು ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಮುಂಬಾಗಿಲಿನ ಇಂಟರ್ ಲಾಕ್ ಮುರಿದು ಮನೆಯ ಒಳಗಡೆ ಪ್ರವೇಶಿಸಿದ್ದರು

ಭಟ್ಕಳ: ಕಳೆದ ತಿಂಗಳು ಮುರುಡೇಶ್ವರ ಮಾವಳ್ಳಿ-1 ರ ಜನತಾ ಕಾಲೋನಿಯಲ್ಲಿ ನಡೆದ ಮಳೆ ಕಳ್ಳತನ ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮುರುಡೇಶ್ವರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

Job Alert: ಇಲ್ಲಿದೆ ಉದ್ಯೋಗಾವಕಾಶ

ಬಂಧಿತ ಆರೋಪಿಗಳನ್ನು ನೇಪಾಳ ಮೂಲದ ನರೇಶ
ನರೇಂದ್ರ ಅಂಗಬಹದ್ದೂರ ಠಾಕೂರ ಹಾಗೂ
ಜನಕ  ಜಯಬಹದ್ದೂರ ಭಂಡಾರಿ ಎಂದು ತಿಳಿದು ಬಂದಿದೆ. ಈ ಆರೋಪಿಗಳು  ಕಳೆದ ಜುಲೈ 18 ರ ಮಧ್ಯರಾತ್ರಿ ಯಲ್ಲಿ  ದೇವೇಂದ್ರ ಈರಪ್ಪ ನಾಯ್ಕ ಎನ್ನುವವರ ಮನೆ ಕಳ್ಳತನ ಮಾಡಿದ್ದರು.

ಇವರ ತಂದೆ ನಿಧನರಾಗಿದ್ದ ಹಿನ್ನೆಲೆ ಅವರ ಕಾರ್ಯ ಮಾಡಲು ತನ್ನ ಹೆಂಡತಿಯೊಂದಿಗೆ ಜನತಾ ಕಾಲೋನಿಯಲ್ಲಿರುವ ತಮ್ಮ ಹಳೆಯ ಮನೆಗೆ ಹೋಗಿ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿ ಮರು ದಿನ ಬೆಳ್ಳಿಗ್ಗೆ ಮನೆಗೆ ಬಂದು ನೋಡಿದಾಗ ಮನೆಯ  ಮುಂಬಾಗಿಲು ಮುರಿದು ಕಳ್ಳತನ ಮಾಡಿದ್ದರು. ಇದನ್ನು ಗಮನಿಸಿದ ಮನೆಯ ಮಾಲೀಕ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು ಮನೆ ಬಾಗಿಲು ತೆರೆದು ನೋಡಿದಾಗ ಯಾರೋ ಕಳ್ಳರು ಮುಂಭಾಗಿಲಿನ ಇಂಟರ್ ಲಾಕ್ ಮುರಿದು ಮನೆಯ ಒಳಗಡೆ ಪ್ರವೇಶಿಸಿ ಕೋಣೆ ಯಲ್ಲಿರುವ ಕಪಾಟನ್ನು ಮುರಿದು ಕಪಾಟಿನಲ್ಲಿದ್ದ ಸುಮಾರು 2 ಲಕ್ಷ 80 ಸಾವಿರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು . ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡ ಮುರುಡೇಶ್ವರ ಠಾಣೆ ಪೊಲೀಸರು ನೇಪಾಳ ಮೂಲದ ಇಬ್ಬರು  ಆರೋಪಿಗಳನ್ನು ಬಂಧಿಸಿ ಅವರಿಂದ 100.6 ಗ್ರಾಂ ತೂಕದ ಬಂಗಾರವನ್ನು  ವಶಪಡಿಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Exit mobile version