Important
Trending
ಮೀನು ಹಿಡಿಯುವ ವೇಳೆ ಮೊಸಳೆ ಹೊತ್ತೊಯ್ದ ವ್ಯಕ್ತಿ ಸಾವು: ಪತ್ತೆಯಾದ ಶವ
ಸತತ ಹುಡುಕಾಟ: ಕಾಳಿ ನದಿಯಲ್ಲಿ ಮೃತದೇಹ ಪತ್ತೆ
![](http://i0.wp.com/vismaya24x7.com/wp-content/uploads/2022/08/Kali-river.jpg?fit=1080%2C456&ssl=1)
ಕಾರವಾರ: ನದಿ ಪಕ್ಕದಲ್ಲಿ ಮೀನು ಹಿಡಿಯುತ್ತಿರುವಾಗ ಮೊಸಳೆ ಎಳೆದೊಯ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಸತತ ಹುಡುಕಾಟದ ಬಳಿಕ ದಾಂಡೇಲಿ ಬಳಿ ಕಾಳಿ ನದಿಯಲ್ಲಿ ಕೊನೆಗೂ ಪತ್ತೆಯಾಗಿದೆ.
Job Alert: ಇಲ್ಲಿದೆ ಉದ್ಯೋಗಾವಕಾಶ
ದಾಂಡೇಲಿಯ ವಿನಾಯಕ ನಗರದ ಅಲೈಡ್ ಬಳಿ ಮೀನು ಹಿಡಿಯುತ್ತಿದ್ದ ಸುರೇಶ್ ವಸಂತ್ ತೇಲಿ(44) ಎನ್ನುವ ವ್ಯಕ್ತಿಯನ್ನು ಮೊಸಳೆ ಎಳೆದೊಯ್ದಿತ್ತು. ಇದನ್ನು ಕೆಲವರು ನೋಡಿದ್ದರು ಎನ್ನಲಾಗಿದೆ.
![](http://i0.wp.com/vismaya24x7.com/wp-content/uploads/2021/10/crocodile-1.jpg?resize=700%2C521&ssl=1)
ನಾಪತ್ತೆಯಾದ ಸುರೇಶನಿಗಾಗಿ ರೆಸ್ಕ್ಯೂ ತಂಡ ಮತ್ತು ಪೊಲೀಸರು ಸತತ ಶೋಧ ಕಾರ್ಯ ನಡೆಸಿ, ಶವವನ್ನು ಪತ್ತೆ ಹೆಚ್ಚಿದ್ದಾರೆ. ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್ ಕಾರವಾರ
![](http://i0.wp.com/vismaya24x7.com/wp-content/uploads/2022/03/yukti-advt.jpg?resize=708%2C398&ssl=1)