Important
Trending
ಗದ್ದೆಗೆ ಹೋಗಿ ಬೇಲಿ ಕಟ್ಟಿ ಬರುತ್ತೇನೆ ಎಂದು ಹೋದ ಗಂಡ ನಾಪತ್ತೆ: ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋದ ಹೆಂಡತಿ
ಈತನ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ
![A woman has filed a complaint](http://i0.wp.com/vismaya24x7.com/wp-content/uploads/2022/09/Missing-husband.jpg?fit=1200%2C675&ssl=1)
ಕುಮಟಾ: ತನ್ನ ಗಂಡ ನಾಪತ್ತೆಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ಮಹಿಳೆಯೊಬ್ಬಳು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆಗಸ್ಟ್ 29 ರಂದು ತನ್ನ ಗಂಡ ಗದ್ದೆಗೆ ಹೋಗಿ ಬೇಲಿ ಕಟ್ಟಿ ಬರುತ್ತೇನೆ ಎಂದು ಹೇಳಿ ಹೋದವರು ಈ ವರೆಗೂ ಮರಳಿ ಮನೆಗೆ ಬಂದಿಲ್ಲವಾಗಿದ್ದು, ಹುಡುಕಿಕೊಡುವಂತೆ ಕೋರಿದ್ದಾರೆ.
ಸಾವಿಗೆ ಮುನ್ನ ವಿಡಿಯೋ ಮಾಡಿ ಬಿಡುಗಡೆ: ಮರಕ್ಕೆ ನೇಣು ಬಿಗಿದು ಕೊಂಡು ಮೃತಪಟ್ಟ ಯುವಕ ? ವಿಡಿಯೋದಲ್ಲಿ ಏನಿದೆ ನೋಡಿ?
ತಾಲೂಕಿನ ಕಲಭಾಗ ನಿವಾಸಿ ಕಲ್ಪನಾ ಭಂಡಾರಿ ಎನ್ನುವವರು ದೂರು ದಾಖಲಿಸಿದ ಮಹಿಳೆ. ಪತಿ ಕಮಲಾಕರ ಪುಂಡ್ಲಿಕ್ ಭಂಡಾರಿ (56) ಎಂಬವರು ನಾಪತ್ತೆಯಾದ ವ್ಯಕ್ತಿ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಸ್ಮಯ ನ್ಯೂಸ್ ಕುಮಟಾ
![](http://i0.wp.com/vismaya24x7.com/wp-content/uploads/2022/08/shri-devi-latest.jpg?resize=708%2C398&ssl=1)