Important
Trending
ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಕಳ್ಳತನ: ಮನೆಯ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಚಿನ್ನಾಭರಣ ದೋಚಿ ಪರಾರಿ
![stole millions of rupees gold jewelry and escaped](http://i0.wp.com/vismaya24x7.com/wp-content/uploads/2022/10/Thieves-who-broke-the-door-of-the-house.jpg?fit=1600%2C1200&ssl=1)
ಭಟ್ಕಳ: ಸಂಬಂಧಿಕರ ಮನೆಗೆ ಹೋಗಿ ಬರುವುದರೊಳಗಾಗಿ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ರಹಮತಾಬಾದಿನಲ್ಲಿ ನಡೆದಿದೆ . ತಾಲೂಕಿನ ರಹಮತಾಬಾದ ನಿವಾಸಿ ಶ್ರೀಮತಿ ಲೈಕುನ್ನಿಸಾ ಐದ್ರುಸಾ ಅಬ್ದುಲ್ ಅಜೀಜ್ ಅಜಾಯಿಬ್ ಎಂಬುವವರ ಮನೆಯನ್ನು ಕಳ್ಳತನ ಮಾಡಲಾಗಿದೆ.
36 ಸಾವಿರ ಆರಂಭಿಕ ವೇತನ: SBI ನಲ್ಲಿ 1,673 ಹುದ್ದೆಗಳು ಖಾಲಿ: ಇಂದೇ ಅರ್ಜಿ ಸಲ್ಲಿಸಿ
![](http://i0.wp.com/vismaya24x7.com/wp-content/uploads/2022/10/Thieves-who-broke-the-door-of-the-house-in-bhatkal.jpg?resize=708%2C531&ssl=1)
ಇವರೆಲ್ಲ ಸಂಬಂಧಿಕರ ಮನೆಗೆ ಹೋಗಿ ಬರುವುದಲೊಳಗಾಗಿ ಮನೆಯ ಬಾಗಿಲನ್ನು ಮುರಿದು ಮಲಗುವ ಕೋಣೆಯ ಕಪಾಟಿನಲ್ಲಿ ಇದ್ದ ಲೈಕುನ್ನಿಸಾ ಐದ್ರುಸಾ ಅಬ್ದುಲ್ ಅಜೀಜ್ ಅಜಾಯಿಬ್ ಹಾಗು ಇಬ್ಬರ ಮಕ್ಕಳಿಗೆ ಸೇರಿದ ಸುಮಾರು 325 ಗ್ರಾಂ ತೂಕದ 14,60,000 ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ, ಭಟ್ಕಳ
![land for sale](http://i0.wp.com/vismaya24x7.com/wp-content/uploads/2022/09/ROSEMARY.jpg?resize=708%2C398&ssl=1)