ಮಹಾಸತಿ ಭೈರವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ವಿಶೇಷವಾಗಿ ದೇವಿಗೆ ನಿಂಬೆಹಣ್ಣಿನ ಅಲಂಕಾರ

ಕುಮಟಾ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಮಿರ್ಜಾನ್, ಕುಮಟಾದ ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ವಿಶೇಷವಾಗಿ ದೇವಿಗೆ  ವಿಶೇಷವಾಗಿ ದೇವಿಗೆ (ಕಾತ್ಯಾಯಿನಿ)  ನಿಂಬೆಹಣ್ಣಿನ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ  ಲಲಿತ ಸಹಸ್ರನಾಮ, ಪಂಚಾಮೃತ ಅಭಿಷೇಕ, ಭಕ್ತಿಗಾಯನ (ಸಿಂಚನಾ ಆಚಾರಿ ಮತ್ತು ತಂಡ, ಹೊನ್ನಾವರ), ದುರ್ಗಾ ಹವನ, ಸಂಜೆ ಮಹಾಮಂಗಳಾರತಿಯೊಂದಿಗೆ ನವರಾತ್ರೋತ್ಸವದ ಆರನೇ  ದಿನವು ಸಂಪನ್ನವಾಯಿತು.

ವಿಸ್ಮಯ ನ್ಯೂಸ್ ಕುಮಟಾ

Exit mobile version