![](http://i0.wp.com/vismaya24x7.com/wp-content/uploads/2022/10/A-chicken-shop-accidentally-caught-fire.jpg?fit=1280%2C720&ssl=1)
ಸಿದ್ದಾಪುರ : ಚಿಕನ್ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಅಂಗಡಿಯಲ್ಲಿದ್ದ ನಗದು ಹಣ ಹಾಗೂ ವಸ್ತುಗಳು ನಾಶವಾದ ಘಟನೆ ತಾಲೂಕಿನ ಹಲಗೇರಿ ನಡೆದಿದೆ. ಬೆಂಕಿ ಹೊತ್ತಿಕೊಂಡ ವಿಷಯ ತಿಳಿದ ಸಿದ್ದಾಪುರ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಹತ್ತಿಕೊಂಡು ಉರಿಯುತ್ತಿರುವ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
![](http://i0.wp.com/vismaya24x7.com/wp-content/uploads/2022/10/hitendra-naik-siddapura.jpg?resize=708%2C472&ssl=1)
ಆಕಸ್ಮಿಕವಾಗಿ ಹೊತ್ತುಕೊಂಡು ಬೆಂಕಿಯಿಂದಾಗಿ ಅಂಗಡಿಯಲ್ಲಿದ್ದ ವ್ಯಾಪಾರವಾದ ನಗದು ಹಣ ಹಾಗೂ ಇನ್ನಿತರ ವಸ್ತುಗಳು ನಾಶವಾಗಿದ್ದು, ಅದೃಷ್ಟವಶಾತ್ ಯಾವುದೇ ಗಾಯ ನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ . ಬೆಂಕಿಯು ಹೆಚ್ಚಿನ ಪ್ರದೇಶಕ್ಕೆ ವ್ಯಾಪಿಸದಂತೆ ತಡೆದಿದ್ದು , ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸ್ಥಳೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
![](http://i0.wp.com/vismaya24x7.com/wp-content/uploads/2022/10/shop-accidentally-caught-fire.jpg?resize=708%2C398&ssl=1)
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ