Important
Trending

ವೈರ್ ಬಂಡಲುಗಳನ್ನು ಕದ್ದ ಕಳ್ಳ ಅರೆಸ್ಟ್: ಸುಮಾರು 8 ಲಕ್ಷಮೌಲ್ಯದ ವೈರ್ ವಶಕ್ಕೆ

ಕಾರವಾರ: ಇಲ್ಲಿನ ಇಲೆಕ್ಟ್ರಿಕಲ್ ಅಂಗಡಿಯೊoದರಲ್ಲಿ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ವೈರ್ ಬಂಡಲುಗಳನ್ನು ಕದ್ದ ಕಳ್ಳನನ್ನು ಬಂಧಿಸುವಲ್ಲಿ ಚಿತ್ತಾಕುಲಾ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ರಾಜಸ್ಥಾನ ಮೂಲದ, ಹಾಲಿ ಉತ್ತರ ಗೋವಾ ನಿವಾಸಿ ಈಶ್ವರಸಿಂಗ್ ರಜಪೂತ ಎಂದು ತಿಳಿದುಬಂದಿದೆ.ಸದಾಶಿವಗಡ ಟೋಲ್‌ನಾಕಾದ ಬಳಿ ಇರುವ ಕುಶಾಲಿ ಕಾಂಪ್ಲೆಕ್ಸ್ ನಲ್ಲಿ ಶಾಂತದುರ್ಗಾ ಅಂಗಡಿಯಲ್ಲಿ ತಿಂಗಳ ಕಳ್ಳತನವಾಗಿತ್ತು.

ಮೃತಪಟ್ಟ ಹೆಂಡತಿಯ ಅಂತಿಮಕ್ರಿಯೆ ಮುಗಿಸಿ ಮರಳಿ ಮನೆಗೆ ಬರುವಷ್ಟರಲ್ಲಿ ಮನೆಗೆ ಕನ್ನ ಹಾಕಿದ ಕಳ್ಳರು: ನಗದು, ಚಿನ್ನಾಭರಣ ದೋಚಿ ಪರಾರಿ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ಪೊಲೀಸರು ಖಚಿತ ಮಾಹಿತಿ ಸಂಗ್ರಹಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಪಿ ಡಾ.ಸುಮನ ಡಿ.ಪನ್ನೇಕರ್, ಹೆಚ್ಚುವರಿ ಎಸ್ಪಿ ಎಸ್.ಬದರಿನಾಥ್ ಮತ್ತು ಡಿವೈಎಸ್ಪಿ ವೆಲೆಂಟೈನ್ ಡಿಸೋಜಾರವರುಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button