Big News
Trending

ನಾಗಪಂಚಮಿ : ನಾಗಾರಾಧನೆಗೊಂದು ಶ್ರೇಷ್ಠ ದಿನ

ಭಾರತೀಯರಾದ ನಾವು ,ನಮಗೆ ಆಶ್ರಯ ನೀಡಿದ ,ಭೂಮಿಯನ್ನು ಪೂಜಿಸುವರಲ್ಲದೇ, ಈ ಭೂಮಿಯಲ್ಲಿರುವ ಪ್ರಾಣಿ –ಪಕ್ಷಿ-ವೃಕ್ಷ ಮುಂತಾದವುಗಳಷ್ಟೇ ಅಲ್ಲ, ಅಣು-ರೇಣು-ತೃಣಕಾಷ್ಠಳಲ್ಲೂ ದೇವರನ್ನು ಕಂಡವರು ನಾವು .ಅಂತೆಯೇ ‘ಸರ್ಪ’ದ ಮಹಿಮೆಯನ್ನು ಅರಿತು ಪ್ರಾಚೀನ ಕಾಲದಿಂದ ಪೂಜಿಸಿಕೂಂಡು ಬಂದಿದೇವೆ.
ಪುರಾಣಗಳ ಪ್ರಕಾರ ದಕ್ಷ ಪ್ರಜಾಪತಿಯ ಮಗಳಾದ ಕದ್ರು ಹಾಗೂ ಕಶ್ಯಪ ಮಹರ್ಷಿಯಿಂದ ಹುಟ್ಟಿದವುಗಳೇ ‘ಸರ್ಪ’ಗಳು. ಅನಂತ- ವಾಸುಕಿ-ಶೇಷ-ತಕ್ಷಕ ಮುಂತಾದ ಹೆಸರಿನಿಂದ ಖ್ಯಾತರಾದ ಇವು ,ಕದ್ರುವಿನ ಪುತ್ರರಾದ ಸರ್ಪರಾಜರು ,ಅಮೃತಕ್ಕಾಗಿ ದೇವ-ದಾನವರು ಮಂದರಪರ್ವತವನ್ನೆ ಕಡೆಗೋಲನ್ನಾಗಿ ಮಾಡಿಕೂಂಡು, ಕ್ಷೀರಸಾಗರಕಡೆಯುವಾಗ ,ವಾಸುಕಿ ಸರ್ಪವು ಕಡೆಗೋಲಿಗೆ ಹಗ್ಗವಾಗಿದ್ದು, ಅಮೃತದ ಉದ್ಭವಕ್ಕೆ ಕಾರಣವಾಯಿತು. ಶೇಷಸರ್ಪವು ಬಲತಾಯಿಯಾದ ವಿನತೆಯ ವಿಷಯದಲ್ಲಿ ತನ್ನ ತಾಯಿ ಕದ್ರು ಮಾಡಿದ ಅಪರಾಧಕ್ಕೆ.ಬಹಳನೂಂದು, ಬ್ರಹ್ಮನಿಂದ ಭೂಭಾರ ಹೂರುವ ಸಾಮರ್ಥ್ಯ ಪಡೆದು ,ಭೂಮಿಯನ್ನು ಹೂತ್ತು, ಒಂದಂಶದಿಂದ ಪಾತಾಳದಲ್ಲಿಯೂ, ಇನ್ನೂಂದು ಅಂಶದಿಂದ ಮಾಹಾವಿಷ್ಣುವಿನ ಹಾಸಿಗೆಯಾಗಿಯೂ ಇರುವುದು . ಸರ್ಪವು ಶಿವನ ಕೂರಳ ಆಭರಣವಾಗಿ ,ತ್ರಿಪುರಸಂಹಾರಕಾಲದಲ್ಲಿ ಶಿವನ ಧನುಸ್ಸಿನ ಹಗ್ಗವಾಗಿ ,ಗಣಪತಿಯ ಹೂಟ್ಟೆಯ ಪಟ್ಟಿಯಾಗಿ , ದುರ್ಯೋಧನನ ರಥದ ಧ್ವಜದ ಚಿಹ್ನೆಯಾಗಿ ,ಪ್ರತಿಯೂಬ್ಬರಲ್ಲಿಯೂ ಇರುವ ಷಟ್ಚಕ್ರದ ಕುಂಡಲಿನೀಶಕ್ತಿಯ ಪ್ರತೀಕವಾಗಿ ,ತ್ರೇತಾಯುಗದ ಲಕ್ಷ್ಮಣ-ದ್ವಾಪರಯುಗದ ಬಲರಾಮ ,ಕೃತಯುಗದ ಸುಬ್ರಹ್ಮಣ್ಯನ ಅವತಾರ ಸ್ವರೂಪಿಯಾದ ‘ ಸರ್ಪ’ವು ಭಾರತೀಯರಾದ ನಮಗಷ್ಟೇ ಅಲ್ಲ,ನೇಪಾಳ –ಇಂಡೋನೇಷ್ಯಾ ಮುಂತಾದ ರಾಷ್ಟ್ರದವರಿಗೂ ಪೂಜಾರ್ಹವಾಗಿದೆ.

ನಿರ್ಣಯ ಸಿಂಧುವಿನ ಪ್ರಕಾರ –
ಶ್ರಾವಣೇ ಪಂಚಮೀ ಶುಕ್ಲಾ ಸಂಪ್ರೋಕ್ತಾ ನಾಗಪಂಚಮೀ |
ತಾಂಪರಿತ್ಯಜ್ಯ ಪಂಚಮ್ಯಶ್ಚತುರ್ಥಿ ಸಹಿತಾಹಿತಾಃ||
ಸರ್ಪಗಳ ಆರಾಧನೆಗೆ ಶ್ರಾವಣಮಾಸದ ಶುಕ್ಲಪಕ್ಷದ ‘ಪಂಚಮೀ’ ಪ್ರಶಸ್ತದಿನವಾಗಿದ್ದು, ಆಸ್ತಿಕರೆಲ್ಲರೂ ಇದನ್ನು ‘ನಾಗಪಂಚಮೀ’ ಯಾಗಿ ಆಚರಿಸುವರು,

ನಾಗಪಂಚಮಿ ಆಚರಣೆಯ ವಿಧಾನ ;- ನಾಗ ಪಂಚಮಿಯಂದು ಪ್ರಾತಃಕಾಲದಲ್ಲಿ ಸ್ನಾನ –ನಿತ್ಯ ಕರ್ಮ ಪೂರೈಸಿ,ಶುಭ್ರವಸ್ತ್ರಗಳನ್ನುಟ್ಟು,ನಮ್ಮ ನಮ್ಮ ಕುಟುಂಬದವರು ಆಚರಿಸಿಕೊಂಡು –ನಂಬಿಕೊಂಡು ಬಂದ ನಾಗಬನದ ನಾಗಸನ್ನಿದಿಗೆ ತೆರಳಿ .ಅಲ್ಲಿಯ ಹುತ್ತ-ನಾಗವಿಗ್ರಹಕ್ಕೆ ಕ್ಷೀರಾಭಿಷೇಕ ಮಾಡಿ ,ಅರಿಸಿನ-ರಕ್ತಚಂದನ ಲೇಪಿಸಿ ,ಹೂವಿನಿಂದ ಅಲಂಕರಿಸಿ ,ಅಕ್ಕಿಹಿಟ್ಟಿನಿಂದ ಮಾಡಿದ ಅಕ್ಕಿರೂಟ್ಟಿ,ಸಿಹಿಕಜ್ಜಾಯ,ಅರಳು–ಹಾಲು-ಹಣ್ಣು-ಕಾಯಿಯನ್ನು ನೈವೈದ್ಯ ಮಾಡುವುದಲ್ಲದೇ,ತೆಂಗಿನಗರಿಯಿಂದ ಮಾಡಿದ ,ಸರ್ಪಾಕೃ ತಿಯನ್ನು ಸಮರ್ಪಿಸಿ , ಭಕ್ತಿ-ಶ್ರಧ್ಧೆಯಿಂದ ಪ್ರಾರ್ಥಿಸುವರು. ಹೀಗೆ ನಾಗವನ್ನು ಪೂಜಿಸಿದರೆ ,
ಯೇ ತಸ್ಯಾಂ ಪೂಜಯಂತೀಹ ನಾಗನ್ ಭಕ್ತಿಪುರಃಸರಾಃ |
ನತೇಷಾಂ ಸರ್ಪತೋವೀರ ಭಯಂಭವತಿ ಕುತ್ರಚಿತ್ || ( ನಿರ್ಣಯ ಸಿಂಧು)

ನಾಗದೇವರು ನಮ್ಮೆಲ್ಲಾ ಇಷ್ಟಾರ್ಥ ಗಳನ್ನು ಈಡೇರಿಸುವುದಲ್ಲದೆ, ವಿಷಭಾದೆ-ಚರ್ಮರೋಗವನ್ನು ಹೋಗಲಾಡಿಸುವುದು ,ಸಂತಾನಪ್ರಾಪ್ತಿ-ಧನಪ್ರಾಪ್ತಿ ಉಂಟಾಗಿ ,ನಾಗನ ಅನುಗ್ರಹದಿಂದ ವರ್ಷ ಪೂರ್ತಿ, ಸುಖ –ಸಂತೋಷ ನೆಲೆಸುವದೆಂಬ ನಂಬಿಕೆ ಇದೆ.ಇನ್ನು ‘ನಾಗಪಂಚಮಿ ವ್ರತ’ ಆಚರಿಸುವವರು , ಚತುರ್ಥೀ ದಿನ ವ್ರತ ಸಂಕಲ್ಪಿಸಿ,ಒಂದು ಹೂತ್ತು ಮಾತ್ರ ಆಹಾರ ಸ್ವೀಕರಿಸಿ ,ನಾಗಪಂಚಮಿದಿನ ಪೂರ್ಣ ಉಪವಾಸವಿದ್ದು ನಾಗನನ್ನು ಪೂಜಿಸಿ,ರಾತ್ರಿ ಆಹಾರ ಸ್ವೀಕರಿಸುವರು.ಭಾರತದ ವಿವಿಧ ಭಾಗದಲ್ಲಿ ಅಲ್ಲಿಯ ಸ್ಥಳಿಯ ಸಂಪ್ರದಾಯಕ್ಕನುಗುಣವಾಗಿ ಆಚರಣೆ ಭಿನ್ನ ಭನ್ನ ವಾಗಿದೆ.ಕೆಲಭಾಗದಲ್ಲಿ ಮನೆಯ ಮುಖ್ಯದ್ವಾರದ ಎರಡೂ ಪಾರ್ಶ್ವದಲ್ಲಿ ಗೋಮಯದಿಂದ ನಾಗನ ಚಿತ್ರಬರೆದು ಹಾಲು ದೂರ್ವೆ- ದರ್ಭೆ- ಚಂದನ ಹೂವುಗಳಿಂದ ಪೂಜಿಸುವರು . ಇನ್ನು ಕೆಲ ಕಡೆ ಬೆಳ್ಳಿ ಬಂಗಾರದ ಪ್ರತಿಮೆಯನ್ನು ಪೂಜಿಸಿ ಕೃತಾರ್ಥರಾಗುವರು. ಉತ್ತರ ಕರ್ನಾಟಕದ ಭಾಗದಲ್ಲಿ ಈ ದಿನ ಸಹೋದರರು ,ತಮ್ಮ ವಿವಾಹಿತ ಸಹೋದರಿಯನ್ನು ತಮ್ಮ ಮನೆಗೆ ಕರೆದು ಸತ್ಕರಿಸುವ ಸಂಪ್ರದಾಯವಿದೆ, ‘ಪಂಚಮಿಹಬ್ಬ’ ವೆಂದೇ ಅದು ಉತ್ತರಕರ್ನಾಟಕದವರಿಗೆ ದೊಡ್ಡಹಬ್ಬವಾಗಿದೆ.

ನಾಗರಪಂಚಮಿಯ ಪೌರಾಣಿಕ ಹಿನ್ನಲೆ:
ಸರ್ಪಗಳ ಆರಾಧನೆ ವೇದಕಾಲದಿಂದಲೇ ಇದೆ. ಋಗ್ವೇದದಲ್ಲಿ ಸರ್ಪವನ್ನು ಸ್ತುತಿಸುವ ಸರ್ಪಸೂಕ್ತವಿದೆ.ಕೃಷ್ಣ ಯಜುರ್ವೇದದಲ್ಲಿ
ನಮೋ¸ಸ್ತು ಸಪೇ ರ್ಭ್ಯೋ ಯೇ ಕೇಚ ಪೃಥಿವೀಮನು|
ಯೇಂತರಕ್ಷೇ ಯೇ ದಿವಿ ತೇಭ್ಯಃ ಸರ್ಪಭ್ಯೋ ನಮಃ||

ಅಂದರೆ ,ಭುವಿ –ದಿವಿ-ಅಂತರಿಕ್ಷಗಳಲ್ಲಿರುವ ಅಶ್ವತ್ಥ-ವಟವೃಕ್ಷಗಳಲ್ಲಿರುವ ,ನೀರಿನಲ್ಲಿರುವ ಎಲ್ಲಾ ಸರ್ಪಗಳಿಗೆ ನಮಸ್ಕಾರ, ಎಂದು ಸ್ತುತಿ ಮಾಡಿ ,ಅವು ನಮ್ಮ ಇಷ್ಟಾರ್ಥ ನೆರವೆರಿಸಲಿ ಎಂದು ಪ್ರಾರ್ಥಿಸಲಾಗಿದೆ.
ಕಾಳಿಂಗ ಎನ್ನುವ ಸರ್ಪವು ನಂದಗೋಕುಲದ ಸಮೀಪ ಹರಿಯುವ ಯಮುನಾ ನದಿಯ ಒಂದು ಭಾಗದಲ್ಲಿ ವಾಸವಾಗಿತ್ತು.ಕಾಳಿಂಗನಿಂದಾಗಿ ಆ ಭಾಗದ ನದಿ ನೀರು ವಿಷದಿಂದ ಕುಲಷಿತವಾಗಿತ್ತು.ಗೋಕುಲ ನಿವಾಸಿಗಳಿಗೆ ಇದರಿಂದ ತೊಂದರೆ ಉಂಟಾದಾಗ ,ಕೃಷ್ಣ ಸಮಸ್ಯೆ ನಿವಾರಣೆಗೆ ನದಿಗಿಳಿದು, ಅಲ್ಲಿ ವಾಸವಾಗಿದ್ದ ಕಾಳಿಂಗನನ್ನು ಸೋಲಿಸಿದ .ಆ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು.ಕೃಷ್ಣ, ಕಾಳಿಂಗನಿಗೆ ಅಭಯವಿತ್ತು,ಅಲ್ಲಿಂದ ಕಳುಹಿಸಿದ .”ಯಾರು ಈ ದಿನ ನಾಗನನ್ನು ಆರಾಧಿಸುವರೋ ಅವರ ಕಷ್ಟಗಳು ನಿವಾರಣೆಯಾಗುವವು”. ಎಂದು ಸಾರಿದ .ಅಲ್ಲಿಂದ ಮೋದಲುಗೊಂಡು ನಾಗಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ.
ಪರೀಕ್ಷೀತರಾಜನು ಸರ್ಪದಂಶನದಿಂದ ಮರಣಹೂಂದಿದ. ಆತನ ಮಗ ಜನಮೇಜಯರಾಜನು ಇದರಿಂದ ಕೋಪಗೊಂಡು ಸರ್ಪಕುಲವನ್ನೇ ನಾಶಪಡಿಸುತ್ತೇನೆಂದು’ ಸರ್ಪಸತ್ರ’ ವನ್ನು ಕೈಗೊಂಡ. ಆಸ್ತಿಕಮಹರ್ಷಿಯು ಜನಮೇಜಯರಾಜನನ್ನು ಪ್ರಸನ್ನಗೊಳಿಸಿ ಸರ್ಪಯಜ್ನವನ್ನು ನಿಲ್ಲಿಸಿದ. ಜನಮೇಜಯನು ಆಸ್ತಿಕಮುನಿಯ ಮಾತಿನಂತೆ ಸರ್ಪಯಜ್ನವನ್ನು ನಿಲ್ಲಿಸಿದ ದಿನವೇ ಪಂಚಮಿಯಾಗಿತ್ತು.

ಸರ್ಪ ಮತ್ತು ವೈಜ್ಞಾನಿಕತೆ
ಶಾಸ್ತ್ರದಲ್ಲಿ ನಾಗಪಂಚಮಿಯಂದು ನಾಗವಿಗ್ರಹಕ್ಕೆ ಹಾಲಿನಿಂದ ಅಭಿಷೇಕ ಮಾಡಲು ಮಾತ್ರ ಹೇಳಿದ್ದಾರೆಯೇ ಹೊರತು ,ಜೀವಂತ ಸರ್ಪಕ್ಕೆ ಹಾಲನ್ನು ಕುಡಿಸಲು ಎಲ್ಲಿಯೂ ಹೇಳಿಲ್ಲ. ಸರ್ಪ ಹಾಲನ್ನು ಕುಡಿದರೆ,ಅದಕ್ಕೆ ಅಜೀಣವಾಗಿ ಸಾಯಲೂಬಹುದು.ಇದರಿಂದ ಸರ್ಪಕ್ಕೆ ಹಾಲನ್ನು ಕುಡಿಸಿದ ಪುಣ್ಯಕ್ಕೆ ಬದಲಾಗಿ, ಸರ್ಪ ವಧೆ ಮಾಡಿದ ದೋಷವೇ ಅಧಿಕವಾಗಿ ,ಮತ್ತೊಂದು ಅನರ್ಥಕ್ಕೆ ಕಾರಣವಾಗುವುದು , ಇನ್ನು ಸರ್ಪವನ್ನು ಹಿಂಸಿಸಬಾರದು, ಕೊಲ್ಲಬಾರದು, ಸರ್ಪವನ್ನು ವಧಿಸಿದರೆ,ವಧಿಸಿದವನ ಕುಟುಂಬದಲ್ಲಿ ಮುಂದೆ ಕ್ಷೀಣಸಂತಾನ ಅಥವಾ ಸಂತಾನವೇ ಆಗದು ಎಂಬುದು ಕೇವಲ ನಂಬಿಕೆ ಅಷ್ಟೇ ಅಲ್ಲ,ಸತ್ಯವೂ ಕೂಡ ಆಗಿದೆ, ಸರ್ಪವನ್ನು ಕೋಲ್ಲುವಾಗ ,ಆ ಸರ್ಪವು ಕೋಂದವನನ್ನು ಉದ್ದೇಶಿಸಿ ನೋವಿನಿಂದ ಶಪಿಸುವುದು ಒಂದು ಕಡೆಯಾದರೆ ,ಅದು ಸಾಯುವಾಗ ಸೂಸುವ ಅಥವಾ ಹೂರ ಹಾಕುವ ಪ್ರಭಾವವು, ಕೋಂದವನ ವಂಶವಾಹಿನಿ ಮೇಲೆ ನೇರ ಪರಿಣಾಮ ಬೀರುವುದಲ್ಲದೇ,ಆತನ ಮುಂದಿನ ತಲೆಮಾರಿಗೂ ಮುಂದುವರಿಯುವುದು.ಅದಕ್ಕಾಗಿ ‘ಯಾವುದೇ ಕಾರಣದಿಂದ ಸರ್ಪ ಮರಣ ಹೋಂದಿದರೂ,ಅದರ ಕೆಟ್ಟ ಪರಿಣಾಮ ಸಮೀಪ ಹೋದ ಎಲ್ಲರ ಮೇಲೆ ಆಗುವುದು’ ಎಂಬ ಕಾರಣಕ್ಕೆ, ಅದನ್ನು ಮೃತ ಹೂಂದಿದ ಸರ್ಪವನ್ನು ದಹನ ಮಾಡಿದರೆ ( ಸರ್ಪ ಸಂಸ್ಕಾರ) ಪುಣ್ಯ ಎಂದು ಧಾರ್ಮಿಕತೆಯ ಒಟ್ಟಿಗೆ ಜೋಡಿಸಿದರು, ಈ ರೀತಿಯದಾದ ಸರ್ಪ ಸಂಬಂಧಿ ದೋಷ ಪರಿಹಾರಕ್ಕಾಗಿ ನಾಗಪ್ರತಿಷ್ಠೆ, ಸರ್ಪಸಂಸ್ಕಾರ,ಆಶ್ಲೇಷಾಬಲಿ ಇತ್ಯಾದಿ ವಿಧಾನಗಳನ್ನು ಶಾಸ್ತ್ರ ಸೂಚಿಸಿದ್ದು.ಇದರಿಂದ ಅನೇಕರು ಪರಿಹಾರ ಪಡೆದುಕೂಂಡಿದ್ದು ಕೂಡ, ಅಷ್ಟೇ ಸತ್ಯವಾಗಿದೆ.

ಭಾರತಿಯ ಪರಂಪರೆಯ ಆಸ್ತಿಕರಾದ ನಮಗೆ ನಾಗರೆಂದರೆ ಕೇವಲ ‘ಸ್ನೇಕ್’ ಅಲ್ಲ ಅಥವಾ ಸಾಮಾನ್ಯ ಸರೀಸೃಪವೂ ಅಲ್ಲ, ಅದು ದೈವಿಗುಣವನ್ನು ಹೂಂದಿರುವ ಶಕ್ತಿಯಾಗಿದೆ.ಪ್ರಸ್ತುತ ಈ ವಿಕಟಅಥವಾ ಸಂಕಷ್ಟ ಸಮಯದಲ್ಲಿ ಸಂಭ್ರಮದಿಂದ ‘ನಾಗಪಂಚಮಿಹಬ್ಬ’ವನ್ನು ‘ಹಬ್ಬ’ವಾಗಿ ಆಚರಿಸುವ ಸ್ಥಿತಿಯಲ್ಲಿ ನಾವಿಲ್ಲ.ಆದರೂ ನಮ್ಮ ನಮ್ಮ ವ್ಯಾಪ್ತಿಯಲ್ಲಿ ಸರಳವಾಗಿ ಆಚರಿಸಿ, ನಮ್ಮ ನಮ್ಮ ಕುಟುಂಬವನ್ನು ಸುಖ-ಸಂಮೃದ್ಧಿಯಿಂದ ,ಸುರಕ್ಷಿತವಾಗಿಡು ಎಂದು ನಾಗಶಕ್ತಿಯಲ್ಲಿ ಪ್ರಾಥಿಸುವುದೇ ನಮಗಿರುವ ಶ್ರೇಷ್ಠ ಮಾರ್ಗವಾಗಿದೆ.

ಲೇಖನ: ಶ್ರೀ ಗಣೇಶ್ ಭಟ್, ಸಂಸ್ಕøತ ಉಪನ್ಯಾಸಕರು
ನೆಲ್ಲಿಕೇರಿ, ಕುಮಟಾ

Back to top button