ಅಂಕೋಲಾದಲ್ಲಿ ಇಂದು 14ಕೇಸ್?

ಗುಣಮುಖರಾದ 8ಮಂದಿ ಬಿಡುಗಡೆ.
ಮುಲ್ಲಾವಾಡದಲ್ಲಿ ಮುಂದುವರೆದ ಸೋಂಕಿನ ಸರಪಣಿ

[sliders_pack id=”1487″]

ಅಂಕೋಲಾ: ಮುಲ್ಲಾವಾಡದ ಸೋಂಕಿನ ಸರಪಣಿ ಮುಂದುವರೆದಿದ್ದು, ಗುರುವಾರ ಮತ್ತೇ 14 ಕರೊನಾ ಕೇಸ್‍ಗಳು ದೃಢಪಟ್ಟಿವೆ ಎನ್ನಲಾಗಿದೆ. ©Copyright reserved by Vismaya tvಇವರೆಲ್ಲರೂ ಈ ಹಿಂದಿನ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರೆಂದು ತಿಳಿದು ಬಂದಿದೆ. ಈ ಕುರಿತು ಹೆಲ್ತ್ ಬುಲೆಟಿನಲ್ಲಿ ದೃಢಗೊಳ್ಳಬೇಕಿದೆ.
ಮುಲ್ಲಾವಾಡದಲ್ಲಿ ದಿನೇ ದಿನೇ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಆರೋಗ್ಯ ಇಲಾಖೆಯವರು ಇಂದು ವಿಶೇಷ ಕ್ಯಾಂಪ್ ಮಾದರಿಯಲ್ಲಿ 67ಜನರ ಗಂಟಲು ದ್ರವ ಸಂಗ್ರಹಿಸಿ ತಾಲೂಕಾಸ್ಪತ್ರೆಯ ಪ್ರಯೋಗಾಲಯದಲ್ಲಿಯೇ ಆಂಟಿಜನ್ ಕಿಟ್ ಮೂಲಕ ಪರೀಕ್ಷೆಗೊಳಪಡಿಸಿದಾಗ 14 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ.©Copyright reserved by Vismaya tv ಸೋಂಕಿನಿಂದ ಗುಣಮುಖರಾದ 8ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಹಬ್ಬದ ಆಚರಣೆ ನಡೆಯಲ್ಲಿದ್ದು, ಪಟ್ಟಣದಲ್ಲಿ ನಾನಾ ಕಾರಣಗಳಿಂದ ಜನದಟ್ಟನೆ ಹೆಚ್ಚುವ ಸಾಧ್ಯತೆ ಇದೆ. ಈ ವೇಳೆಯಲ್ಲಿ ಜನ ಗುಂಪುಗೂಡದಂತೆ ಸಂಬಂಧಿಸಿದ ಇಲಾಖೆಗಳು ಎಚ್ಚರವಹಿಸಬೇಕಿದೆ. ಸಾರ್ವಜನಿಕರು ಸಹ ಸ್ವಯಂ ಪ್ರೇರಿತರಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಡಳಿತ ವ್ಯವಸ್ಥೆಯೊಂದಿಗೆ ಕೈ ಜೋಡಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Exit mobile version