ಸನ್ಯಾಸಿವೇಷದಲ್ಲಿ ಗುಹೆಯಲ್ಲಿದ್ದುಕೊಂಡು ಮಹಿಳೆಯರೊಂದಿಗೆ ಅಸಭ್ಯ ವರ್ತನೆ: ವಿದೇಶಿ ಮಹಿಳೆಯ ಹೇಳಿಕೆ ಬಳಿಕ ಎಚ್ಚೆತ್ತ ಪೊಲೀಸರು ಮಾಡಿದ್ದೇನು?

ಗೋಕರ್ಣ: ಕುಡ್ಲೆ ಬೀಚ್ ಗೋಗರ್ಭದ ಗುಹೆಯೊಂದರಲ್ಲಿ ಆಯುರ್ವೇದ ಔಷಧಿಯ ಮೂಲಕ ಚರ್ಮರೋಗ ಇನ್ನಿತರ ಕಾಯಿಲೆಗಳನ್ನು ಗುಣಪಡಿಸುವುದಾಗಿ ಹೇಳಿ ಸ್ವಾಮಿವೇಷದಲ್ಲಿ ಮುಂಬೈ ಮೂಲದ ವ್ಯಕ್ತಿಯೊಬ್ಬ ಉಳಿದುಕೊಂಡಿದ್ದ. ಆದರೆ, ಈತ ಅಲ್ಲಿಗೆ ಬರುವ ಹೆಂಗಸರೊoದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದ್ದು, ಪೊಲೀಸ್ ಆವಾಜಿಗೆ ಹೆದರಿ ಸ್ಥಳದಿಂದ ಕಾಲ್ಕಿತ್ತ ಪ್ರಸಂಗ ನಡೆದಿದೆ.

ಹೌದು, ಕಳೆದ ಒಂದೆರಡು ತಿಂಗಳಿoದ ತಾನು ಸ್ವಾಮಿ ಎಂಬoತೆ ಖಾವಿ ತೊಟ್ಟು, ಗೋಕರ್ಣಕ್ಕೆ ಪ್ರವಾಸಕ್ಕೆ ಎಂದು ಬರುವ ಮಹಿಳೆಯರನ್ನು ಹಾಗೂ ಹುಡುಗಿಯರನ್ನು ಗುಹೆಯೊಳಗೆ ಬರಮಾಡಿಕೊಂಡು ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಈ ಕುರಿತು ವಿದೇಶಿ ಮಹಿಳೆಯೊಬ್ಬಳು ತನ್ನ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಳು. ಈ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸರು ಸ್ಥಳಕ್ಕೆ ತೆರಳಿ ಆತನಿಗೆ ಹೊರಹೋಗುವಂತೆ ತಿಳಿಸಿದ್ದರು. ಇಲ್ಲದಿದ್ರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಕ್ಕೆ ತಿಳಿಸಿದಾಗ ಸ್ಥಳದಿಂದ ಪರಾರಿಯಾಗಿದ್ದಾನೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version