ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ಪಲ್ಟಿ: ಚಾಲಕ ದುರ್ಮರಣ

ಅಂಕೋಲಾ: ಟಿಪ್ಪರ್ ಪಲ್ಟಿಯಾಗಿ ಚಾಲಕ ಮೃತ ಪಟ್ಟ ಘಟನೆ ಅಂಕೋಲಾ ತಾಲೂಕಿನ ಹಿಲ್ಲೂರು ಪಂಚಾಯತ್ ವ್ಯಾಪ್ತಿಯ ನೆವಳಸೆ ಬಳಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ಕುಮಟಾ ದಿವಗಿ ನಿವಾಸಿ ಶ್ರೀಧರ ಶಿವಪ್ಪ ದೇಶಭಂಡಾರಿ(44) ಮೃತ ದುರ್ದೈವಿ ಚಾಲಕನಾಗಿದ್ದು ಈತ ಗುಂಡಬಾಳ ಹತ್ತಿರದ ನೆವಳಸೆಯಿಂದ ಕುಮಟಾ ಕಡೆ ರಸ್ತೆಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಲಾರಿ ಚಲಾಯಿಸಿ ನೆವಳಸೆ ಶಾಲೆ ಬಳಿ ಇಳಿಜಾರಿನಲ್ಲಿ ವೇಗ ನಿಯಂತ್ರಿಸಲಾಗದೇ ಟಿಪ್ಪರ್ ಪಲ್ಟಿಯಾದ ಕಾರಣ ಎಡಗೈ ಭುಜ, ಮುಖ ಮತ್ತು ಅಂಗಾAಗಳಿಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಅಕ್ರಮವಾಗಿ 2.60 ಕೋಟಿ ವೆಚ್ಚದ ವಜ್ರವನ್ನು ದುಬೈಗೆ ಸಾಗಿಸುತ್ತಿದ್ದ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಟ್ಕಳ ಮೂಲದ ಇಬ್ಬರು ವಶಕ್ಕೆ

ಅಪಘಾತದ ಸುದ್ದಿ ತಿಳಿದು ಗೋಕರ್ಣದಿಂದ ಬಂದಿದ್ದ ಖಾಸಗಿ ಅಂಬುಲೆನ್ಸ್ ಚಾಲಕ ಗಣೇಶ್ ನಾಯಕ್ ತಲಗೇರಿ ಮತ್ತಿತರರು ಅಪಘಾತದ ಸ್ಥಳದಿಂದ ಮೃತದೇಹವನ್ನು ಅಂಕೋಲಾ ತಾಲೂಕ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಹಕರಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪುಟ್ಟ ಎರಡು ಮಕ್ಕಳ ತಂದೆಯಾಗಿದ್ದ ದೀವಗಿಯ ಶ್ರೀಧರ ಭಂಡಾರಿ,ತನ್ನ ಸಂಸಾರದ ನೊಗ ಹೊತ್ತು ಟಿಪ್ಪರ್ ಏರಿ ಹೋದವನು,ಮರಳಿ ಬಾರದ ಲೋಕಕ್ಕೆ ತೆರಳುವಂತಾಗಿದ್ದು ಬಡ ಕುಟುಂಬದಲ್ಲಿ ಶೋಕದ ಛಾಯೆ ಆವರಿಸುವಂತಾಗಿದೆ. ನೊಂದ ಬಡ ಕುಟುಂಬಕ್ಕೆ ಆರ್ಥಿಕ ಸಹಾಯದ ಹಾಗೂ ನೆರವಿನ ಹಸ್ತದ ಮೂಲಕ ಸಾಂತ್ವನ ಹೇಳಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version