ಗುಣವಂತೆಯಲ್ಲಿ ರಿಕ್ಷಾ ನಿಲ್ದಾಣ ಉದ್ಘಾಟನೆ: ಸ್ವಂತ ಕರ್ಚಿನಲ್ಲಿ ನಿರ್ಮಿಸಿಕೊಟ್ಟ ಸುನೀಲ್ ನಾಯ್ಕ

ಹೊನ್ನಾವರ: ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಹೊನ್ನಾವರ ತಾಲೂಕಿ ಗುಣವಂತೆಯ ರಿಕ್ಷಾ ನಿಲ್ದಾಣವನ್ನು ತಮ್ಮ ಸ್ವಂತ ಕಚಿನಲ್ಲಿ ನಿರ್ಮಿಸಿದ್ದು ಇದರ ಉದ್ಘಾಟನೆಯನ್ನು ನೆರವೇರಿಸಿದರು. ಹೌದು, ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ತಮ್ಮ ವೈಯಕ್ತಿಕ ವೆಚ್ಚದಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಟ್ಕಳ ಮತ್ತು ಹೊನ್ನಾವರ ತಾಲೂಕಿನ ವ್ಯಾಪ್ತಿಯಲ್ಲಿ ಸರ್ಕಾರದ ಯ್ಯಾವುದೆ ಅನುಧಾನ ಬಳಸದೆ ತಮ್ಮ ಸ್ವಂತ ಹಣದಲ್ಲಿ ರಿಕ್ಷಾ ನಿಲ್ದಾಣ ನಿರ್ಮಿಸಿ ಕೋಡುತ್ತಿದ್ದಾg. ಇಲ್ಲಿಯವರೆಗೆ ಒಟ್ಟೂ 38 ನೇ ನಿಲ್ದಾಣ ನಿರ್ಮಿಸಿಕೊಟ್ಟಿದ್ದಾರೆ.

ಇದೇ ವೇಳೆ, ಗುಣವಂತೆಯ ರಿಕ್ಷಾ ನಿಲ್ದಾಣz ನಿರ್ಮಿಸಿಕೋಟ್ಟ ಶಾಸಕ ಸುನೀಲ ನಾಯ್ಕ ಅವರನ್ನು ಇಡಗುಂಜಿ ಕ್ರಾಸನಿಂದ ರಿಕ್ಷಾ ರ‍್ಯಾಲಿಯ ಮೂಲಕ ಸ್ವಾಗತಿಸಲಾಯಿತು. ನಂತರ ಶಾಸಕ ಸುನೀಲ ನಾಯ್ಕ ರಿಬ್ಬನ್ ಕತ್ತರಿಸುವ ನಿಲ್ದಾಣವನ್ನು ಉದ್ಘಾಟಿಸಿದರು, ನಿಲ್ದಾಣ ನಿಮಿರ್ಸಿಕೋಟ್ಟ ಶಾಸಕ ಸುನೀಲ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ಇದವರೆಗೂ 38 ನೇ ರಿಕ್ಷಾ ನಿಲ್ದಾಣ ನೀರ್ಮಿಸಿದ್ದೇನೆ. ರಿಕ್ಷಾ ಚಾಲಕರು ಕಷ್ಟದಲ್ಲಿರುವವರಿಗೆ ಸ್ಪಂದಿಸುವವರು, ಅವರಿಗೆ ನಾನು ಚಿರಋಣಿ, ಜಾಗ ಇದ್ದರೆ ಇನ್ನು ಎಷ್ಟೆ ನಿಲ್ದಾಣವಾದರು ಮಾಡಿಕೋಡಲು ಸಿದ್ದನಿದ್ದೆನೆ ಒಬ್ಬ ಶಾಸಕನಾಗಿ ನಿಮ್ಮಜೋತೆ ನಾನಿದ್ದೆನೆ ಎಂದರು, ಈ ಸಂದರ್ಭದಲ್ಲಿ ಜಿ ಜಿ ಶಂಕರ, ಶಂಭು ಬೈಲಾರ, ಪಕ್ಷದ ಮುಕಂಡರು, ಕಾರ್ಯಕರ್ತರು, ಗ್ರಾಮಸ್ಥರು, ರಿಕ್ಷಾ ಚಾಲಕರು ಮುಂತಾದವರು ಇದ್ದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ.

Exit mobile version