Follow Us On

WhatsApp Group
Important
Trending

ಎರಡು ವರ್ಷ ಕಳೆದರೂ ಮನೆಗೆ ಬಾರದ ಕೂಲಿ ಕೆಲಸಕ್ಕೆ ತೆರಳಿದ ವ್ಯಕ್ತಿ : ಗುರುತು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಮನವಿ

ಕುಮಟಾ: ಕೂಲಿ ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿ 2 ವರ್ಷ ಕಳೆದರೂ ಸಹ ಮನೆಗೂ ಬಾರದೇ, ಕೆಲಸ ಮಾಡುವ ಸ್ಥಳದಲ್ಲಿಯೂ ಇರದೇ ಇರುವ ಕಾರಣ ಕಾಣೆಯಾದ ವ್ಯಕ್ತಿಯನ್ನು ಹುಡುಕಿಕೊಡುವಂತೆ ಕುಟುಂಬಸ್ಥರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕುಮಟಾ ತಾಲೂಕಿನ ಮೂರೂರು ಗ್ರಾಮದ ನೆಲ್ಲಿಕೇರಿಯ 52 ವರ್ಷ ವಯಸ್ಸಿನ ನಾರಾಯಣ ಹುಲಿಯಪ್ಪ ಗೌಡ ಇತನು ಮೊದಲಿನಿಂದಲೂ ಶಿರಸಿಯಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದವನಾಗಿದ್ದು, ಕುಮಟಾದಿಂದ ಶಿರಸಿಗೆ ತೆರಳಿ ಸುಮಾರು 3 ತಿಂಗಳುಗಳ ಕಾಲ ಕೆಲಸ ಮಾಡಿ ಮನೆಗೆ ಬಂದು ಹೋಗುತ್ತಿದ್ದ. ಆದರೆ 2019 ರ ಡಿಸೆಂಬರ್ 17 ರಂದು ಕೂಲಿ ಕೆಲಸಕ್ಕೆಂದು ಮನೆಯಿಂದ ಶಿರಸಿಗೆ ಹೋದವನು ಈ ವರೆಗೆ ಮರಳಿ ಮನೆಗೆ ಬಂದಿಲ್ಲವಾಗಿದ್ದು, ಅತ್ತ ವಿಚಾರಿಸಿದಾಗ ಶಿರಶಿಯ ಹೆಗಡೆಯವರ ಮನೆಯಲ್ಲಿಯೂ ಇಲ್ಲ ಎಂದು ತಿಳಿದುಬಂದಿದೆ.

ಹಣ್ಣಿನ ವಾಹನದಲ್ಲಿ ದನದ ಮಾಂಸ ಸಾಗಾಟ: ವಾಹನ ತಡೆದು ಚಾಲಕನ ಬಂಧಿಸಿದ ಪೊಲೀಸರು

ನಾರಾಯಣ ಹುಲಿಯಪ್ಪ ಗೌಡ ಅಂದು ಬರುಬಹುದು ಇಂದು ಬರಬಹುದು ಎಂದು ಕಾದ ಕುಟುಂಬಸ್ಥರು ವರ್ಷಗಳೇ ಕಳೆದರೂ ಕೂಡ ಮನೆಗೆ ಬಾರದೇ ಇರುವ ನಿಟ್ಟಿನಲ್ಲಿ ಕುಮಟಾ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ನಾರಾಯಣ ಹುಲಿಯಪ್ಪ ಗೌಡ ಇತನನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದಾರೆ. ಭಾವ ಚಿತ್ರದಲ್ಲಿರುವ ಇತನ ಗುರುತು ಸಿಕ್ಕಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ್, ಕುಮಟಾ

Back to top button