ಈಜಲು ಹೋದ ವಿದ್ಯಾರ್ಥಿನಿ ನದಿಯಲ್ಲಿ ಮುಳುಗಿ ಸಾವು

ಸಿದ್ದಾಪುರ : ಹೊಳೆಯಲ್ಲಿ ಈಜುಲು ಹೋದ ವಿದ್ಯಾರ್ಥಿನಿಯೋರ್ವಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಹಾವಿನ ಬೀಳು ಗ್ರಾಮದ ದೊರ್ಬೇ ಜಡ್ಡುಹರ್ಲ ಗುಂಡಿಯಲ್ಲಿ ನಡೆದಿದೆ. 8 ನೇ ತರಗತಿ ವಿದ್ಯಾರ್ಥಿನಿ ಶಿರಸಿ ತಾಲೂಕಿನ ಅಮ್ಮಿನಳ್ಳಿಯ ಕಾಂಚಾಳದ ಧನ್ಯ ವೆಂಕಟೇಶ ಗೌಡ ಮೃತ ದುರ್ದೈವಿ…

ಸಿದ್ದಾಪುರ ತಾಲೂಕಿನ ಹಾವಿನ ಬೀಳು ಗ್ರಾಮದ ಹಸಗೋಡ ಗೆ ಬೇಸಿಗೆ ರಜೆಗಾಗಿ ದೊಡ್ಡಮ್ಮನ ಮನೆಗೆ ಬಂದಿದ್ದಳು. ಮಂಗಳವಾರ ಮದ್ಯಾಹ್ನ 2.30 ಸುಮಾರಿಗೆ ನಾಲ್ಕು ಜನ ಸೇರಿ ಕೊಂಡು ಅಘನಾಶಿನಿ ಹೊಳೆಗೆ ಈಜುತ್ತಿರುವಾಗ ಆಳವಾದ ನೀರಿಗೆ ಹೋಗಿ ಮುಳುಗಿ ಮೃತಪಟ್ಟಿದ್ದಾಳೆ. ಬುಧವಾರ ಮೃತದೇಹ ಪತ್ತೆಯಾಗಿದೆ. ಘಟನೆ ಗೆ ಸಂಬಂಧಿಸಿದಂತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ದಿವಾಕರ ಸಂಪಖಂಡ‌,‌ ಸಿದ್ದಾಪುರ

Exit mobile version