ಫೋಟೋ ಶೂಟಿಂಗ್‌ಗೆ ಹೊರಟಿದ್ದ ಇಬ್ಬರು ಯುವಕರ ಮೇಲೆ ಹರಿದ ಲಾರಿ: ಸ್ಥಳದಲ್ಲೇ ಬೈಕ್ ಸವಾರರ ದುರ್ಮರಣ

ಯಲ್ಲಾಪುರ : ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಇಬ್ಬರ ಯುವಕರ ಮೇಲೆ ಲಾರಿಯೊಂದು ಹಾಯ್ದು ದುರ್ಘಟನೆ ನಡೆಸಿದ್ದು, ಇಬ್ಬರು ಬೈಕ್ ಸವಾರರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕಿರವತ್ತಿ ಸಮೀಪ ಸಂಭವಿಸಿದೆ. ತಂಬೂರಿನ ಸೂರಜ್ ಪಾಲಂಕರ್ ಹಾಗೂ ಮಂಜುನಾಥ ವೀರಭದ್ರ ಬಡಿಗೇರ ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಈ ಇಬ್ಬರು ಯುವಕರು, ಕಿರವತ್ತಿಯಿಂದ ಯಲ್ಲಾಪುರಕ್ಕೆ ಪೋಟೋ ಶೂಟ್ ಗೆಂದು ಬಂದಿದ್ದರು ಎಂಬ ಮಾಹಿತಿ ಲಭಿಸಿದೆ.

ಯಲ್ಲಾಪುರದಿಂದ ಕಿರವತ್ತಿಗೆ ಹೋಗುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದಿದ್ದು, ಈ ವೇಳೆ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಯೊಂದು ಸವಾರರ ಮೇಲೆ ಹಾದು ಹೋಗಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version