ಬೈಕ್ ಸವಾರನ ಮೇಲೆ ಹರಿದ ಬಸ್: ನವ ವಿವಾಹಿತ ಸ್ಥಳದಲ್ಲೇ ಸಾವು

ಶಿರಸಿ: ಖಾಸಗಿ ಬಸ್ ಮತ್ತು ಬೈಕಿನ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಸಿಯ ಸಾಮ್ರಾಟ ಹೊಟೇಲ್ ಮುಂಭಾಗದಲ್ಲಿ ನಡೆದಿದೆ. ಬೈಕ್ ಸವಾರ ಮಹೇಶ್ ಬೋವಿವಡ್ಡರ್ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಗಣೇಶ್ ನಗರದ ನಿವಾಸಿಯಾಗಿದ್ದ ಈತ ಕಳೆದ ತಿಂಗಳ ಹಿಂದಷ್ಟೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ. ಅಪಘಾತದ ವೇಳೆ ಬಸ್ ಚಕ್ರ ಬೈಕ್ ಸವಾರನ ಮೇಲ ಹರಿದು ದುರ್ಘಟನೆ ಸಂಭವಿಸಿದೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version