ಅಣ್ಣನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಕರಡಿ ದಾಳಿ: ವ್ಯಕ್ತಿ ಗಂಭೀರ ಗಾಯ

ಜೊಯಿಡಾ: ತಾಲೂಕಿನ ರಾಮನಗರದಿಂದ ತಿಂಬೋಲಿ ಹೋಗುವ ಮಾರ್ಗದಲ್ಲಿ ಕರಡಿ ದಾಳಿಯಿಂದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡ‌ ಘಟನೆ  ನಡೆದಿದೆ. ವಿಠ್ಠು ತಾನಾಜಿ ಶೇಳಕೆ ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ ಯಾಗಿದ್ದು,ಈತ ರಾಮನಗರದಿಂದ ತಿಂಬೋಲಿಗೆ ಇವನ ಅಣ್ಣನ ಮನೆಗೆ  ನಡೆಸುಕೊಂಡು  ಹೋಗುತ್ತಿರುವಾಗಿ ಕರಡಿ ದಾಳಿಮಾಡಿ ಗಾಯಗೊಳಿಸಿದೆ. ರಾಮನಗರ ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಬೇಳಗಾವಿಗೆ ಹೆಚ್ಚಿನ ಚಿಕಿತ್ಸೆಗೆ ಕೊಂಡೋಯ್ಯಲಾಗಿದೆ.

ಜಗಲಬೇಟ ಎಸಿಎಪ್ ಕೆ.ಡಿ ನಾಯ್ಕ ಮತ್ತು  ಜಗಲಬೇಟ ಅರ್.ಎಪ್ ಓ ಚಂದ್ರಕಾಂತ ಹಿಪ್ಪರಗಿ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ಗಾಯಗೊಂಡ ವ್ಯಕ್ತಿಯನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವ್ಯಕ್ತಿಯ ಎಡ ಕಣ್ಣು,ತಲೆ ಮತ್ತು ಕೈಗೆ ಗಂಬೀರವಾಗಿ ಕರಡಿ ಗಾಯಗೊಳಿಸಿದೆ.

ವಿಸ್ಮಯ ನ್ಯೂಸ್ ಜೋಯ್ಡಾ

Exit mobile version