ಬಿಸ್ಕಿಟ್ ಬಾಕ್ಸ್ ಗಳ ಮದ್ಯದಲ್ಲಿ ಮದ್ಯ ಸಾಗಾಟ: ಆರೋಪಿಯ ಬಂಧನ

ಜೊಯಿಡಾ: ತಾಲೂಕಿನ ರಾಮನಗರದಲ್ಲಿ ಜೊಯಿಡಾ ಸಿಪಿಐ ನಿತ್ಯಾನಂದ ಪಂಡಿತ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಗೋವಾ ಸರಾಯಿ ಹಿಡಿದು ಪ್ರಕರಣ ದಾಖಲಿಸಲಾಗಿದೆ. ಗೋವಾದಿಂದ ಹೈದರಾಬಾದ್ ಹೋಗುತಿದ್ದ ವಾಹನ ಸಂಖ್ಯೆ ಅಶೋಕ ಲೈಲೆಂಡ್‌ ನಲ್ಲಿ ಪಾರ್ಲೆಜಿ ಬಿಸ್ಕಿಟ್ ಬಾಕ್ಸ್ ಗಳ ಮದ್ಯದಲ್ಲಿ ಸುಮಾರು 150 ಕ್ಕೂ ಹೆಚ್ಚು ಬಾಕ್ಸ್ ಗೋವಾ ಸರಾಯಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಆರೋಪಿ ವಾಹನ ಚಾಲಕ ಕೊತ್ತಪಳ್ಳಿ ನಾಗಶಾಲಿ ಸತ್ಯನಾರಾಯಣ ಅಚಾರಿ, ನೆಲ್ಲಗೊಂಡ ತೆಲಂಗಾಣ , ಈತನನ್ನು ವಶಕ್ಕೆ ಪಡೆಯಲಾಗಿದೆ. ವಾಹನ ಮೌಲ್ಯ ಮತ್ತು ಸರಾಯಿ ಮೌಲ್ಯ ಸೇರಿ ಒಟ್ಟೂ ಸುಮಾರು 50 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್ ವಿಷ್ಣುವರ್ದನ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಜೊಯಿಡಾ ಸಿಪಿಐ ನಿತ್ಯಾನಂದ ಪಂಡಿತ ಸಿಬ್ಬಂದಿಗಳಾದ ಮಂಜುನಾಥ ಚೌರದ,ದರ್ಶನ ಎಸ್.ಎಚ್ ಭಾಗವಹಿಸಿದ್ದರು.

ವಿಸ್ಮಯ ‌ನ್ಯೂಸ್ ಜೋಯ್ಡಾ

Exit mobile version