Important
Trending

ಮನೆಯ ಕಂಪೌoಡ್ ಒಳಗಡೆ ಬೆಳೆಸಿದ್ದ ಗಂಧದ ಮರ ಕಳ್ಳತನ: ಬೈಕಿನಲ್ಲಿ ಸಾಗಿಸುತ್ತಿರುವಾಗ ಆರೋಪಿ ಅರೆಸ್ಟ್

ಸಿದ್ದಾಪುರ : ಮನೆ ಕಂಪೌಂಡ್ ನ ಒಳಗಡೆ ಬೆಳೆಸಿದ್ದ ಗಂಧದ ಮರವನ್ನು ಕಳ್ಳತನ ಮಾಡಿಕೊಂಡು ಬೈಕ್ ನಲ್ಲಿ ಕಟ್ಟಿಕೊಂಡು ಸಾಗಾಟ ಮಾಡುತ್ತಿರುವಾಗ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿರುವ ಘಟನೆ ಹಾಳದಕಟ್ಟಾದ ಸಮೀಪದ ಹಣಜಿಬೈಲ್ ಕ್ರಾಸ್ ನಲ್ಲಿ ನಡೆದಿದೆ.
ಹನುಮಂತ ದ್ಯಾವ ನಾಯ್ಕ್ ಹಸುವಂತೆ ಎನ್ನುವ ವ್ಯಕ್ತಿಯು ಬೈಕ್ ನಲ್ಲಿ ಗಂಧದ ತುಂಡುಗಳನ್ನು ಕಟ್ಟಿಕೊಂಡು ಕೊಂಡ್ಲಿ ಕಡೆಯಿಂದ ಹಸುವಂತೆ ಕಡೆಗೆ ಸಾಗಾಟ ಮಾಡುತ್ತಿರುವಾಗ ಪೊಲೀಸರು ದಾಳಿ ಮಾಡಿ ಗರಗಸ, ಕತ್ತಿ, ಗಂಧದ ತುಂಡು 31 ಕೆಜಿ, ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button