Focus News
Trending
ಓರಿಸ್ಸಾಕ್ಕೆ ತೆರಳಿ ಕುಮಟಾ ಕೃಷಿಕರಿಂದ ಹಲಸು ಕೃಷಿ ಮತ್ತು ಕಸಿ ತರಬೇತಿ: 30 ಕ್ಕೂ ಹೆಚ್ಚು ಗುಡ್ಡಗಾಡು ಶಿಬಿರಾರ್ಥಿಗಳಿಗೆ ಪ್ರಯೋಜನ
![](http://i0.wp.com/vismaya24x7.com/wp-content/uploads/2023/07/pradeep-kumar-hegde.jpeg?fit=1600%2C900&ssl=1)
ಕುಮಟಾ: ಓರಿಸ್ಸಾದ ರಾಯಘಡದ ಮಲ್ಲಿಜರಣ ಎಂಬಲ್ಲಿಯ ಸೆಂಟರ್ ಆಫ್ ಎಕ್ಸ್ ಲೆನ್ಸ್ ಪಾರ್ ಟ್ರೈಬಲ್ ಅಗ್ರಿಕಲ್ಚರ್ & ರಿಸರ್ಚ್ ಸಂಸ್ಥೆ ನಡೆಸುವ ಹಲಸು ಕೃಷಿ ಮತ್ತು ಕಸಿ ತರಬೇತುದಾರರಾಗಿ ಕುಮಟಾ ತಾಲೂಕಿನ ಬರಗದ್ದೆಯ ಪ್ರದೀಪ್ ಕುಮಾರ್ ಹೆಗಡೆ ಮತ್ತು ಮಾಧವ್ ಹೆಗಡೆ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿದರು. ಸುಮಾರು ಮೂವತ್ತಕ್ಕೂ ಹೆಚ್ಚು ಗುಡ್ಡಗಾಡು ಜನರು ಇದರ ಸದುಪಯೋಗ ಪಡೆದುಕೊಂಡರು. ಈ ಸಂಸ್ಥೆಯು ಹಲವಾರು ವರ್ಷದಿಂದ ರೈತರ ಏಳ್ಗೆಗೆ ಶ್ರಮಿಸುತ್ತಿದ್ದು, ಅಚ್ಯುತ್ ದಾಸ್ ಅವರು ಇದರ ನಿರ್ದೇಶಕರಾಗಿ ಸಂಸ್ಥೆಯ ಏಳಿಗೆಗೆ ಶ್ರಮಿಸುತ್ತಿದ್ದಾರೆ.
![](http://i0.wp.com/vismaya24x7.com/wp-content/uploads/2023/07/i-school-new.jpg?resize=708%2C398&ssl=1)
ಪ್ರದೀಪಕುಮಾರ್ ಹೆಗಡೆ ಇವರು ಮೂಲತಃ ಕೃಷಿಕರಾಗಿದ್ದು, ತಮ್ಮ ತೋಟದಲ್ಲಿ ಬಾಳೆ, ತೆಂಗು, ಅಡಿಕೆ, ಕಾಳುಮೆಣಸು, ಕೊಕೊ ಬೆಳೆಯುತ್ತಿದ್ದು, ಕಸಿಯಲ್ಲೂ ವಿಶೇಷ ಪರಿಣಿತಿ ಹೊಂದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸoಪರ್ಕ ಸಂಖ್ಯೆ :- 9449339966.
ವಿಸ್ಮಯ ನ್ಯೂಸ್, ಕುಮಟಾ