![](http://i0.wp.com/vismaya24x7.com/wp-content/uploads/2023/08/napatte.jpg?fit=1280%2C720&ssl=1)
ಅಂಕೋಲಾ: ಕೆಲಸಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೊರ ಹೋಗಿದ್ದ ಯುವಕ ಮನೆಗೆ ಮರಳದೆ ಕಾಣೆಯಾಗಿರುವ ಕುರಿತು ಅಂಕೋಲಾ ಪೋಲೀಸ್ ಠಾಣೆಯಲ್ಲಿ ದೂರೊಂದು ತಡವಾಗಿ ದಾಖಲಾಗಿದೆ. ತಾಲೂಕಿನ ಬಾಳೇಗುಳಿ ಸಮೀಪದ
ಬೊಗ್ರಿಬೈಲ್ ನಿವಾಸಿ ಗೌರೀಶ ಗೋವಿಂದ ಗೌಡ (28) ಕಾಣೆಯಾದ ಯುವಕ.
![](http://i0.wp.com/vismaya24x7.com/wp-content/uploads/2023/07/hegde-aye-hospital-web-1.jpg?resize=708%2C398&ssl=1)
ಕೂಲಿ ಕೆಲಸಗಾರನಾದ ಈತ 29 ಜೂನ್ 2019 ರಂದು ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟವನು ಇದುವರೆಗೆ ಬಾರದೇ ಇರುವ ಕಾರಣ ಎಲ್ಲಡೆ ಹುಡುಕಾಟ ನಡೆಸಿದರೂ ಈ ವರೆಗೂ ತನ್ನ ಮಗ ಸಿಕ್ಕಿಲ್ಲ ಎಂದು ನೊಂದ ತಾಯಿ ಪೋಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಮೇಲಿನ ಚಿತ್ರದಲ್ಲಿರುವ ಯುವಕ ಎಲ್ಲಿಯಾದರೂ ಕಂಡು ಬಂದರೆ, ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ